ಕಾಂಗ್ರೆಸ್ ಆಡಳಿತದ ದೌರ್ಬಲ್ಯಗಳ ನಿವಾರಣೆ
ಮದ್ರಾಸು, ಜೂನ್ 20 - ಮುಂಬರುವ ಸಾರ್ವತ್ರಿಕ ಚುನಾವಣೆಯು ಈ ದೇಶದ ಜನರಿಗೆ ಇತರ ಅವಕಾಶಗಳ ಜೊತೆಗೆ `ಅತ್ಯಗತ್ಯವಾಗಿದ್ದ ವಿರಾಮದ ಅವಕಾಶವನ್ನೂ, ಚುನಾವಣೆಗಳಲ್ಲಿ ಅಲ್ಪ ಬಹುಮತದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಅದರ ಮೇಲೆ ಈ ತನಕ ಹೊಂದಿದ್ದ ಬಿಗಿಮುಷ್ಟಿಯನ್ನು ಸಧ್ಯವಾದಾಗಲ್ಲೆಲ್ಲ ಭಿನ್ನಗೊಳಿಸುವ ಅವಕಾಶ~ ಒದಗಿಸಿದೆ ಎಂಬುದಾಗಿ ಪಿಎಸ್ಪಿ ಚುನಾವಣೆಯನ್ನು ಸ್ವಾಗತಿಸಿದೆ.
ನೆಹರೂರೊಡನೆ ಪಟ್ನಾಯಕ್ರ ಭೇಟಿ
ನವದೆಹಲಿ, ಜೂನ್ 20 - ಒರಿಸ್ಸಾದ ಮುಖ್ಯಮಂತ್ರಿಯಾಗಲಿರುವ ಶ್ರೀ ವಿಜಯಾನಂದ ಪಟ್ನಾಯಕ್ ಅವರು ಜೂನ್ 23 ರಂದು ಪ್ರಮಾಣದ ವಚನ ಸ್ವೀಕರಿಸಲಿರುವ ಒರಿಸ್ಸಾದ ನೂತನ ಮಂತ್ರಿಮಂಡಲವು ಕೈಗೊಳ್ಳಲಿರುವ ಕಾರ್ಯಕ್ರಮ ಕುರಿತು ಪ್ರಧಾನಿ ನೆಹರೂರೊಡನೆ ಇಂದು ಚರ್ಚೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.