ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿ
ನವದೆಹಲಿ, ಜುಲೈ 29- ಗ್ರಾಮಾಂತರ ಪ್ರದೇಶಗಳ ಆರ್ಥಿಕ ವ್ಯವಸ್ಥೆಯನ್ನು ಬಲಗೊಳಿಸಿ ಜನಸಾಮಾನ್ಯರಿಗೆ ಸುಖ ಸಂತೋಷಗಳನ್ನುಂಟು ಮಾಡಲು ಗ್ರಾಮಾಂತರ ಪ್ರದೇಶದಲ್ಲಿ ಕೈಗಾರಿಕೀಕರಣ ತೀವ್ರತರಗೊಳ್ಳಬೇಕೆಂದು ಪ್ರಧಾನಮಂತ್ರಿ ನೆಹರೂರವರು ಇಂದು ಇಲ್ಲಿ ಒತ್ತಾಯ ಪೂರ್ವಕವಾಗಿ ತಿಳಿಸಿದರು.
`ತ್ರಿವೇಣಿ' ನಿಧನ
ಮೈಸೂರು, ಜುಲೈ 29- ಕನ್ನಡದ ಸುಪ್ರಸಿದ್ಧ ಕಾದಂಬರಿಕಾರರಾದ `ತ್ರಿವೇಣಿ' (ಶ್ರೀಮತಿ ಅನುಸೂಯ)ರವರು ಇಂದು ಇಲ್ಲಿನ ಮಿಷಿನ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 35 ವರ್ಷ ವಯಸ್ಸಾಗಿತ್ತು. ಅವರು 20ಕ್ಕೂ ಹೆಚ್ಚಾಗಿ ಕಾದಂಬರಿಗಳು, ಅನೇಕ ಸಣ್ಣ ಕಥೆಗಳನ್ನು ಬರೆದಿದ್ದಾರೆ.
ಅವರ ಅವಳ ಮನೆ ಕಾದಂಬರಿಗೆ ರಾಷ್ಟ್ರಪತಿ ಪ್ರಶಸ್ತಿ ಮತ್ತು `ತಾವರೆಕೊಳ' ಕಾದಂಬರಿಗೆ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ ದೊರೆತಿವೆ. ಶ್ರೀಮತಿ ಅನುಸೂಯಾರವರು ಶಾರದಾವಿಲಾಸ್ ಕಾಲೇಜಿನ ಅಧ್ಯಾಪಕರಾದ ಶ್ರೀ ಎಸ್.ಎನ್. ಶಂಕರ್ರವರ ಪತ್ನಿ. ಅವರಿಗೆ 11 ವರ್ಷ ವಯಸ್ಸಿನ ಮಗುವೊಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.