ADVERTISEMENT

ಶುಕ್ರವಾರ, 6-7-1962

​ಪ್ರಜಾವಾಣಿ ವಾರ್ತೆ
Published 5 ಜುಲೈ 2012, 19:30 IST
Last Updated 5 ಜುಲೈ 2012, 19:30 IST

ಶಾಸಕರ ಸಂಬಳ  150 ರಿಂದ 200 ರೂ.
ಬೆಂಗಳೂರು, ಜುಲೈ 5
- ಪ್ರಸಕ್ತ ಅಧಿವೇಶನದಲ್ಲಿ ನಡೆಯುವ ಕಾಂಗ್ರೆಸ್ ಪಕ್ಷದ ಸಭೆ ಶಾಸಕರ ಸಂಬಳವನ್ನು 150 ರೂಪಾಯಿಗಳಿಂದ 200 ರೂಪಾಯಿಗಳಿಗೆ ಏರಿಸುವ ಪ್ರಶ್ನೆಯನ್ನು ಚರ್ಚಿಸಲಿದೆ.

ಸದ್ಯದಲ್ಲಿ ಶಾಸಕರಿಗೆ ತಿಂಗಳಿಗೆ 150 ರೂಪಾಯಿ ಸಂಬಳ ಮತ್ತು 100 ರೂಪಾಯಿ ವಿಶೇಷ ಭತ್ಯ ದೊರಕುತ್ತದೆ.

ನಗರಕ್ಕೆ ನೀರು: ರಕ್ಷಣಾ ಇಲಾಖೆ ನೆರವು?
ಬೆಂಗಳೂರು, ಜುಲೈ 5 -
ರಕ್ಷಣಾ ಮಂತ್ರಿ ಶ್ರೀ ವಿ. ಕೆ. ಕೃಷ್ಣಮೆನನ್‌ರವರು ಇಂದು ಇಲ್ಲಿ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರೊಡನೆ ನಡೆಸಿದ ಸಂಭಾಷಣೆ ಫಲವಾಗಿ ನಗರಕ್ಕೆ ಕಾವೇರಿ ನೀರು ತರುವ ಯೋಜನೆಗೆ ರಕ್ಷಣಾ ಇಲಾಖೆ ನೆರವು ದೊರಕುವ ಸಂಭವ ಉಂಟಾಗಿದೆಯೆಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.