`ಅಭ್ಯರ್ಥಿಗಳ ಶಿಫಾರಸು~
ಬೆಂಗಳೂರು, ಅ. 16 -ಮೈಸೂರು ಕಾಂಗ್ರೆಸ್ಸಿನಲ್ಲಿ ಸದಸ್ಯರು ಪಕ್ಷದಲ್ಲಿನ ಯಾವ ಗುಂಪಿಗೇ ಸೇರಿದ್ದಿರಲಿ ಆ ಗಣನೆ ಇಲ್ಲದೆ ಪ್ರಕೃತ ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ಕೊಡುವುದರಲ್ಲಿ ನ್ಯಾಯ ಸಲ್ಲುವುದೆಂದು ಮುಖ್ಯಮಂತ್ರಿ ಶ್ರೀ ಬಿ. ಡಿ. ಜತ್ತಿ ಅವರು ಇಂದು ಇಲ್ಲಿ ಆಶಿಸಿದರು.
ಭೂ ಸುಧಾರಣೆಗೆ ವಿಳಂಬ
ಬೆಂಗಳೂರು, ಅ. 16 - ಭೂ ಸುಧಾರಣೆ ತರುವುದಾಗಿ 14 ವರ್ಷಗಳಿಂದ ಹೇಳುತ್ತಾ ಬಂದಿದ್ದು, ಕಾರ್ಯಗತ ಮಾಡುವುದು ಈಗಲೇ ತಡವಾಗಿದೆಯೆಂದೂ ಅದನ್ನು ತರಲೇ ಬೇಕಾಗಿದೆಯೆಂದೂ ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದ ರೆವಿನ್ಯೂ ಸಚಿವ ಶ್ರೀ ಕಡಿದಾಳ್ ಮಂಜಪ್ಪನವರು `ಜನಕ್ಕೆ ಮೋಸ ಮಾಡುವಂತಿಲ್ಲ~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.