ನೌಕರರಿಗೆ ಹೆಚ್ಚು ತುಟ್ಟಿಭತ್ಯ
ಬೆಂಗಳೂರು, ಆ. 19- ಹಿಂದೂಸ್ಥಾನ್ ವಿಮಾನ ಕಾರ್ಖಾನೆ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ನೌಕರರ ತುಟ್ಟಿಭತ್ಯವನ್ನು ಶೇಕಡ 50 ರಷ್ಟು ಹೆಚ್ಚಿಸಲಾಗಿದೆ.
1-11-61 ರಿಂದ 9 ತಿಂಗಳ ಹಿಂದಿನಿಂದ ಜಾರಿಗೆ ಬರುವ ತುಟ್ಟಿಭತ್ಯದ ಏರಿಕೆಯನ್ನು ರಕ್ಷಣಾ ಸಚಿವ ಶ್ರೀ ವಿ.ಕೆ ಕೃಷ್ಣಮೆನನ್ ಅವರು ಇಂದು ಬೆಳಿಗ್ಗೆ ಎಚ್.ಎ.ಎಲ್. ನೌಕರರ ಸಭೆ ಅನಂತರ ಬಿ.ಇ.ಎಲ್. ನೌಕರರ ಸಭೆಗಳಲ್ಲಿ ಪ್ರಕಟಿಸಿದರು.
ಕೈಗಾರಿಕಾಕರಣ ಅನಿವಾರ್ಯ
ಮುಂಬೈ, ಆ. 19- ಭಾರತವು ಕೈಗಾರಿಕಾ ರಾಷ್ಟ್ರವಾಗುವುದು ಅನಿವಾರ್ಯವೆಂದೂ ಅದು ತನ್ನ ವೈಜ್ಞಾನಿಕ ಹಾಗೂ ತಾಂತ್ರಿಕ ನಾಗರೀಕತೆಯನ್ನು ಬೆಳೆಸಿಕೊಳ್ಳುವುದೆಂದೂ ಪ್ರಧಾನಮಂತ್ರಿ ನೆಹರೂ ಅವರು ಇಲ್ಲಿ ಇಂದು ಒತ್ತಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.