ADVERTISEMENT

ಸೋಮವಾರ, 24-10-1961

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2011, 19:30 IST
Last Updated 23 ಅಕ್ಟೋಬರ್ 2011, 19:30 IST

ಕೇರಳ ಸಮ್ಮಿಶ್ರ ಸರ್ಕಾರ ಮುಂದುವರಿಯದು?
ತಿರುವನಂತಪುರ, ಅ. 23
- ಕೇರಳದಲ್ಲಿ ಪ್ರಸಕ್ತ ಕಾಂಗ್ರೆಸ್ - ಪಿ.ಎಸ್. ಪಿ. ಸಮ್ಮಿಶ್ರ ಸರ್ಕಾರ ಮುಂದುವರಿಯುವ ಬಗ್ಗೆ ತಮ್ಮ ವಿಶ್ವಾಸ ಕುಂದುತ್ತಿದೆಯೆಂದು ಮುಖ್ಯಮಂತ್ರಿ ಶ್ರೀ ಪಟ್ಟಂಥನುಪಿಳ್ಳೆ (ಪಿ. ಎಸ್. ಪಿ.) ಯವರು ಇಂದು ಇಲ್ಲಿ ತಿಳಿಸಿದರು. ಸಚಿವ ಮಂಡಲಿಯ ಸಭೆಯ ನಂತರ ಮುಖ್ಯಮಂತ್ರಿಗಳು ತಮ್ಮ ನಿಲುವು ಸ್ಪಷ್ಟ ಪಡಿಸಿದರು.

ಪೋರ್ಚುಗೀಸ್ ವಸಾಹತು ಷಾಹಿ ಅಂತ್ಯಕ್ಕೆ ಬುನಾದಿ
ಮುಂಬೈ, ಅ. 23
- ಭಾರತದಲ್ಲಿರುವ ಪೋರ್ಚುಗೀಸ್ ನಡುಗಡ್ಡೆಗಳು ಪೋರ್ಚುಗೀಸ್ ಆಡಳಿತದಿಂದ ವಿಮುಕ್ತವಾದರೆ, ಇಡೀ ವಿಶ್ವದಲ್ಲೇ ಪೋರ್ಚುಗೀಸ್ ವಸಾಹತು ಷಾಹಿಯ ಅಂತ್ಯಕ್ಕೆ ಅದು ಬುನಾದಿಯಾಗುವುದೆಂದು ಇಂದು ಇಲ್ಲಿ ಮುಕ್ತಾಯಗೊಂಡ ಪೋರ್ಚುಗೀಸ್ ವಸಾಹತುಗಳ ಕುರಿತ ಎರಡು ದಿನಗಳ ವಿಚಾರಗೋಷ್ಠಿಯಲ್ಲಿ ಪ್ರತಿನಿಧಿಗಳು ಘೋಷಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.