ADVERTISEMENT

ಸೋಮವಾರ, 5-9-1961

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2011, 19:30 IST
Last Updated 4 ಸೆಪ್ಟೆಂಬರ್ 2011, 19:30 IST

ಪೂರ್ವ ಜರ್ಮನಿಯಲ್ಲಿ ಭಯೋತ್ಪಾದನೆ
ಬರ್ಲಿನ್, ಸೆ. 4 -  ಪಶ್ಚಿಮ ಬರ್ಲಿನ್‌ನ ಮೇಯರ್ ಹೆರ್‌ವಿಲ್ಲಿ ಬ್ರಾಂಟ್‌ರವರು ಇಂದು ಇಲ್ಲಿ ಮಾತನಾಡುತ್ತಾ ಪೂರ್ವ ಜರ್ಮನಿಯಲ್ಲಿ ಭಯೋತ್ಪಾದಕರ ಪ್ರಭುತ್ವವು ಆರಂಭವಾಗಿದೆಯೆಂದೂ, ಜನರನ್ನು ಬೇರೆಡೆಗೆ ಒಯ್ದು, ಬಲವಂತ ದುಡಿಮೆ ಶಿಬಿರಗಳಲ್ಲಿಡಲು ಯೋಜನೆ ರೂಪಿಸಲಾಗುತ್ತಿದೆಯೆಂದು ನುಡಿದರು.

ಪಿ.ಎಸ್.ಪಿ. ತಯಾರಿಸಿದ ಮುನ್ಸೀಫ್ ಅಭ್ಯರ್ಥಿಗಳ ಪಟ್ಟಿ
ಬೆಂಗಳೂರು, ಸೆ. 4 -  ಮೈಸೂರು ಪಬ್ಲಿಕ್ ಸರ್ವಿಸ್ ಕಮಿಷನ್ 1961ರ ಮೇ 22 ರಂದು ರಾಜ್ಯದ ನ್ಯಾಯಾಂಗ ಸರ್ವಿಸ್‌ನಲ್ಲಿ ನೇಮಕವಾಗಲು ಅರ್ಹರಾದ, ಯೋಗ್ಯತಾನುಕ್ರಮವಾಗಿ ತಯಾರಿಸಿದ 52 ಮಂದಿ ಯಶಸ್ವೀ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿ ಹೊರಡಿಸಿದ ಸೂಚನೆಯನ್ನು ಇಂದು ಹೈಕೋರ್ಟ್ ರದ್ದುಗೊಳಿಸಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.