ತಾಯ್ನಾಡಿಗೆ ಬಂದ ವೀರಯೋಧರಿಗೆ ಹೂಮಳೆ ಸ್ವಾಗತ
ನವದೆಹಲಿ, ಡಿ. 2– ಪಾಕಿಸ್ತಾನದಿಂದ ಶುಕ್ರವಾರ ಬಿಡುಗಡೆ ಹೊಂದಿ ಇಂದು ಅಮೃತಸರದಿಂದ ದೆಹಲಿ ದಂಡಿಗೆ ಬಂದ 606 ಭಾರತೀಯ ಯುದ್ಧ ಕೈದಿಗಳ ಮೇಲೆ ರೈಲು ನಿಲ್ದಾಣದಲ್ಲಿ ಸಾವಿರಾರು ಜನ ಹೂಮಳೆಗರೆದು ಸ್ವಾಗತ ಕೋರಿದರು.
‘ಭಾರತ್ ಮಾತಾಕಿ ಜೈ’, ‘ಹಿಂದೂಸ್ತಾನ್ ಜಿಂದಾಬಾದ್’ ಎಂಬ ಘೋಷಣೆಗಳನ್ನು ವೀರಯೋಧರು ತಮಗೆ ಸಂದ ಭವ್ಯ ಸ್ವಾಗತಕ್ಕೆ ಉತ್ತರವಾಗಿ ಮೊಳಗಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.