ಪ್ರತ್ಯೇಕ ಆಂಧ್ರ ಬೇಡಿಕೆ ಕೂಗು: ಸುಬ್ಬಾರೆಡ್ಡಿ ಆತ್ಮಾರ್ಪಣೆ ಬೆದರಿಕೆ– ಗಣರಾಜ್ಯ ದಿನ ಬಂದ್ಗೆ ಕರೆ
ರಾಜಮಹೇಂದ್ರಿ, ಜ. 23– ಪ್ರತ್ಯೇಕ ಆಂಧ್ರ ರಚನೆ ಬೇಡಿಕೆ ಈಡೇರಿಕೆಗಾಗಿ ಚಳವಳಿ ತೀವ್ರಗೊಳಿಸುವ ಕಾರ್ಯಕ್ರಮದ ಅಂಗವಾಗಿ, ಮಾಜಿ ಉಪ ಮುಖ್ಯಮಂತ್ರಿ ಬಿ.ವಿ. ಸುಬ್ಬಾರೆಡ್ಡಿಯವರ ಆತ್ಮಾರ್ಪಣೆ ಬೆದರಿಕೆ, ಗಣರಾಜ್ಯ ದಿನದಂದು ಆಂಧ್ರ ಬಂದ್, ನಿಷೇಧಾಜ್ಞೆಗಳ ಉಲ್ಲಂಘನೆಗೆ ಸಾಮೂಹಿಕ ಕಾರ್ಯಕ್ರಮಗಳು– ಇವನ್ನು ಆಂಧ್ರ ಜಂಟಿ ಕ್ರಿಯಾ ಸಮಿತಿ ಪ್ರಕಟಿಸಿದೆ.
ಬಿ.ವಿ. ಸುಬ್ಬಾರೆಡ್ಡಿಯವರು ನಿನ್ನೆ ರಾತ್ರಿ, ‘ಪ್ರತ್ಯೇಕ ರಾಜ್ಯ ರಚನೆಯಾಗದಿದ್ದರೆ ಆತ್ಮಾರ್ಪಣೆ ಮಾಡಿಕೊಳ್ಳುವುದಾಗಿ’ ಬೃಹತ್ ಸಭೆಯಲ್ಲಿ ಪ್ರಕಟಿಸಿದರು.
ಕಾಂಗ್ರೆಸ್ ಸದಸ್ಯತ್ವಕ್ಕೆ ಆಂಧ್ರದ 114 ಮಂದಿ ಶಾಸಕರ ರಾಜೀನಾಮೆ
ಕಾಕಿನಾಡ, ಜ. 23– ನೂರ ಹದಿನಾಲ್ಕು ಮಂದಿ ಕಾಂಗ್ರೆಸ್ ಶಾಸಕರು ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುವ ಪತ್ರಗಳನ್ನು ಆಂಧ್ರದ ಕ್ರಿಯಾಸಮಿತಿ ಅಧ್ಯಕ್ಷ ಬಿ.ವಿ. ಸುಬ್ಬಾರೆಡ್ಡಿ ಅವರಿಗೆ ಸಲ್ಲಿಸಿದ್ದಾರೆ.
ಆಂಧ್ರಭಾಗದಿಂದ ಆಯ್ಕೆಯಾದ 138 ವಿಧಾನಸಭಾ ಸದಸ್ಯರೂ, 39 ವಿಧಾನ ಪರಿಷತ್ ಸದಸ್ಯರೂ ಆಂಧ್ರ ಪ್ರದೇಶದ ಶಾಸಕಾಂಗದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.