ಎ. ಸೂರ್ಯಪ್ರಕಾಶ್ ಅವರ ‘ಸೆಕ್ಯುಲರ್ ಭಾರತಕ್ಕೆ ಸತ್ಯ ತಿಳಿದಿರಬೇಕು’ ಎಂಬ ಲೇಖನ (ಪ್ರ.ವಾ., ಮಾರ್ಚ್ 15), ಕಾಮಾಲೆ ಕಣ್ಣಿನ ‘ಕಮ್ಮಿನಿಷ್ಠರ’ ಕಣ್ತೆರೆಸುವಂತಿದೆ. ನೆಹರೂ ಕುಟುಂಬದ ಆರಾಧಕರಿಗೆ ವಸ್ತುನಿಷ್ಠ ಚರಿತ್ರೆಯ ದರ್ಶನ ಮಾಡಿಸುತ್ತದೆ.
ಇಸ್ಲಾಂ ದಾಳಿಕೋರರಿಂದ ನಡೆದ ಹಿಂದೂ ಹತ್ಯಾಕಾಂಡವು ನಾಝಿ ಹತ್ಯಾಕಾಂಡಕ್ಕಿಂತ ಕ್ರೂರವೂ ಭೀಕರವೂ ಆಗಿತ್ತು ಎಂಬ ಅಂಶವನ್ನು ಇತಿಹಾಸತಜ್ಞ ಗೋಟಿಯೇ ಪುಷ್ಟೀಕರಿಸಿದ್ದಾರೆ. ಈ ಅಪ್ರಿಯ ಸತ್ಯ ಸಾರಿದ ಲೇಖಕರಿಗೆ ಮತ್ತು ಔದಾರ್ಯದಿಂದ ಪ್ರಕಟಿಸಿದ ‘ಪ್ರಜಾವಾಣಿ’ಗೆ ಧನ್ಯವಾದ.
ರಾಮಸುಬ್ರಾಯ ಶೇಟ್, ಚಿಕ್ಕಮಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.