ಇತ್ತೀಚೆಗೆ ಕಳ್ಳರೆಂಬ ಗುಮಾನಿ ಮೇಲೆ ಅಪರಿ ಚಿತರ ಮೇಲೆ ಹಲ್ಲೆ ನಡೆಸುವ ಪ್ರವೃತ್ತಿ ಹೆಚ್ಚುತ್ತಿದೆ. ಮಾನಸಿಕ ಅಸ್ವಸ್ಥರನ್ನು, ಬಾಯಿ ಬಾರದವರನ್ನು ಹೊಡೆದು ಕ್ಯಾಮೆರಾ ಮುಂದೆ ಮಿಂಚುವ ಜನರು ಹೆಚ್ಚುತ್ತಿದ್ದಾರೆ. ಕಾಡುಗಳ ಸಮೀಪ ವಾಸಿಸುವ ಜನರು ಹುಲಿ, ಚಿರತೆಗಳನ್ನು ಸೆರೆ ಹಿಡಿದು ಚಚ್ಚಿ ಸಾಯಿಸುವ ಪ್ರವೃತ್ತಿ ಹೆಚ್ಚುತ್ತಿದೆ.
ಅರಣ್ಯ ಇಲಾಖೆ ಯವರಿಗೆ ಇದು ಗೊತ್ತಿದ್ದರೂ ಕ್ರಮ ಕೈಗೊಳ್ಳು ವುದಿಲ್ಲ ಏಕೆ? ಕೈಗೆ ಸಿಕ್ಕಿದ ಪ್ರಾಣಿಯೇ ಗ್ರಾಮಸ್ಥರಿಗೆ ಉಪಟಳ ನೀಡಿದ ಪ್ರಾಣಿ ಎನ್ನುವುದನ್ನು ಇವರು ಯಾವ ಆಧಾರದ ಮೇಲೆ ಹೇಳುತ್ತಾರೆ?
–ಬಿ.ವಿ.ಕೇಶವ್, ಬೆಂಗಳೂರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.