ಅತ್ಯಂತ ಶಿಸ್ತಿನ ಪಕ್ಷವೆಂದು ಬಿಜೆಪಿಯನ್ನು ಗೆಲ್ಲಿಸಿ ಕಳುಹಿಸಿದ ಕನ್ನಡಿಗರಿಗೆ ಸರ್ಕಾರ ಬಂದಾಗಿನಿಂದ ಅಭೂತ ಪೂರ್ವ ಮನರಂಜನೆಯನ್ನು ಒದಗಿಸುತ್ತಿರುವ ಭಾರತೀಯ ಜನತಾ ಪಕ್ಷಕ್ಕೆ ಧನ್ಯವಾದಗಳು.
ರಾಜ್ಯದಲ್ಲಿ ಬರಗಾಲ ಬಂದು ಕುಡಿಯುವ ನೀರು, ವಿದ್ಯುತ್ ಸಮಸ್ಯೆ, ದನಕರುಗಳಿಗೆ ಮೇವಿನ ಸಮಸ್ಯೆ, ಪಡಿತರ ಸಮಸ್ಯೆ ಕಾಡುತ್ತಿದ್ದರೂ ಆ ಸಮಸ್ಯೆಗಳನ್ನೆಲ್ಲಾ ಮರೆಯುವಂತೆ ಮಾಡಿ ಜನತೆಗೆ ಅತ್ಯುತ್ತಮ ಮನರಂಜನೆ ನೀಡುತ್ತಿದ್ದಾರೆ.
ಮನರಂಜನೆ ಒದಗಿಸಿದ ಬಿಜೆಪಿಗೆ ಹಾಗೂ ಪದೇಪದೇ ಎದುರಾದ ಉಪಚುನಾವಣೆ ಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಪ್ರೊತ್ಸಾಹಿಸಿದ ಪ್ರಜ್ಞಾವಂತ ಮತದಾರ ಪ್ರಭುಗಳಿಗೆ ಜಯವಾಗಲಿ ಎಂದು ಹಾರೈಸೊಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.