ADVERTISEMENT

ಒಣಗಿದ ಮರ, ಕೊಂಬೆ ತೆರವುಗೊಳಿಸಿ

ಕೆ.ಎಸ್‌.ನಾಗರಾಜ
Published 22 ಜುಲೈ 2013, 19:59 IST
Last Updated 22 ಜುಲೈ 2013, 19:59 IST

ನಗರದಲ್ಲಿ ಮಳೆ ಮತ್ತು ಬಿರುಗಾಳಿಗೆ ಸಿಲುಕಿ ಅಪಾಯದ ಅಂಚಿನಲ್ಲಿರುವ ಮರಗಳು ಮತ್ತು ಒಣಗಿ ಹೋಗಿರುವ ಮರದ ಕೊಂಬೆಗಳು ಬೀಳುವುದು ಸ್ಥಿತಿಯಲ್ಲಿದೆ. ನಗರದಲ್ಲಿ ಈಗಾಗಲೇ ಇಂತಹ ಅನೇಕ ಅವಘಡಗಳು ಸಂಭವಿಸಿವೆ.

ಆದರೂ ಇವುಗಳ ಬಗ್ಗೆ ಅಧಿಕಾರಿಗಳು ಕಾಳಜಿ ವಹಿಸಿರುವ ಉದಾಹರಣೆಗಳು ಕಡಿಮೆ. ಈಗಲಾದರೂ ಬಿ.ಬಿ.ಎಂ.ಪಿ. ಮತ್ತು ಅರಣ್ಯ ಇಲಾಖೆ ಅಪಾಯದ ಅಂಚಿನಲ್ಲಿರುವ ಮರಗಳು ಮತ್ತು ಒಣಗಿರುವ ಮರದ ಕೊಂಬೆಗಳ ಬಗ್ಗೆ ಗಮನ ಹರಿಸಿ ಅವುಗಳನ್ನು ಕತ್ತರಿಸಿ ಹಾಕಿ  ಜೀವ ಹಾನಿಯಾಗಿ ಪರಿಹಾರ ಕೊಡುವಂತಹ ಘಟನೆಗಳು ಸಂಭವಿಸದ ಹಾಗೆ ಎಚ್ಚರ ವಹಿಸಬೇಕಿದೆ.
- ಕೆ.ಎಸ್. ನಾಗರಾಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT