ADVERTISEMENT

ಖಾತೆ- ಕ್ಯಾತೆ

​ಪ್ರಜಾವಾಣಿ ವಾರ್ತೆ
Published 31 ಮೇ 2018, 19:30 IST
Last Updated 31 ಮೇ 2018, 19:30 IST

‘ರಾಷ್ಟ್ರದ ಒಳಿತಿಗಾಗಿ ಮೈತ್ರಿ ಮಾಡಿಕೊಂಡಿದ್ದೇವೆ’ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಾಯಕರು ಹೇಳುತ್ತಿದ್ದಾರೆ. ಅದು ನಿಜವೇ ಆಗಿದ್ದರೆ ನಾಡಿನ ಸೇವೆಗಾಗಿ ಯಾರಿಗೆ ಯಾವ ಖಾತೆ ಸಿಕ್ಕರೂ ಜನತಾ ಸೇವೆಯ ಅವಕಾಶ ಸಿಕ್ಕಿದಂತೆ ಅಲ್ಲವೇ? ಹಾಗಿದ್ದ ಮೇಲೆ ಖಾತೆಗಾಗಿ ಯಾಕೆ ಈ ಕ್ಯಾತೆ?

ಡಿವಿಜಿಯವರ ಮಂಕುತಿಮ್ಮನ ಕಗ್ಗದಲ್ಲಿ ಬರುವ

‘ಸರಕಾರ ಹರಿಗೋಲು ತೆರೆಸುಳಿಗಳತ್ತಿತ್ತ

ADVERTISEMENT

ಸುರೆ ಕುಡಿದವರು ಕೆಲರು ಹುಟ್ಟು ಹಾಕುವರು

ಬಿರುಗಾಳಿ ಬೀಸುವುದು, ಜನವೆದ್ದು ಕುಣಿಯುವುದು

ಉರುಳದಿಹುದಚ್ಚರಿಯೋ ಮಂಕುತಿಮ್ಮ’

ಎಂಬ ಸಾಲುಗಳು ಸಾರ್ವಕಾಲಿಕ ಸತ್ಯದಂತಿವೆ ಅಲ್ಲವೇ?

– ಅಲ್ಲಮಪ್ರಭು ಎಂ. ಎಸ್., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.