‘ರಾಷ್ಟ್ರದ ಒಳಿತಿಗಾಗಿ ಮೈತ್ರಿ ಮಾಡಿಕೊಂಡಿದ್ದೇವೆ’ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಾಯಕರು ಹೇಳುತ್ತಿದ್ದಾರೆ. ಅದು ನಿಜವೇ ಆಗಿದ್ದರೆ ನಾಡಿನ ಸೇವೆಗಾಗಿ ಯಾರಿಗೆ ಯಾವ ಖಾತೆ ಸಿಕ್ಕರೂ ಜನತಾ ಸೇವೆಯ ಅವಕಾಶ ಸಿಕ್ಕಿದಂತೆ ಅಲ್ಲವೇ? ಹಾಗಿದ್ದ ಮೇಲೆ ಖಾತೆಗಾಗಿ ಯಾಕೆ ಈ ಕ್ಯಾತೆ?
ಡಿವಿಜಿಯವರ ಮಂಕುತಿಮ್ಮನ ಕಗ್ಗದಲ್ಲಿ ಬರುವ
‘ಸರಕಾರ ಹರಿಗೋಲು ತೆರೆಸುಳಿಗಳತ್ತಿತ್ತ
ಸುರೆ ಕುಡಿದವರು ಕೆಲರು ಹುಟ್ಟು ಹಾಕುವರು
ಬಿರುಗಾಳಿ ಬೀಸುವುದು, ಜನವೆದ್ದು ಕುಣಿಯುವುದು
ಉರುಳದಿಹುದಚ್ಚರಿಯೋ ಮಂಕುತಿಮ್ಮ’
ಎಂಬ ಸಾಲುಗಳು ಸಾರ್ವಕಾಲಿಕ ಸತ್ಯದಂತಿವೆ ಅಲ್ಲವೇ?
– ಅಲ್ಲಮಪ್ರಭು ಎಂ. ಎಸ್., ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.