ADVERTISEMENT

ನಿದ್ರಾ ಮುದ್ರಿತರು!

​ಸಿ.ಪಿ.ಕೆ.ಮೈಸೂರು
Published 9 ಡಿಸೆಂಬರ್ 2012, 22:00 IST
Last Updated 9 ಡಿಸೆಂಬರ್ 2012, 22:00 IST

`ಹೆಚ್ಚು ನಿದ್ದೆ ಒಳ್ಳೆಯದೇ!' (ಪ್ರ.ವಾ., ಡಿ. 4). ಭಾರತೀಯರಿಗೆ ಇದನ್ನು ಹೇಳಿಕೊಡಬೇಕಾಗಿಯೇ ಇಲ್ಲ.ಈ ಸಂಶೋಧನೆ ಅವರನ್ನು ಸಮರ್ಥಿಸುವಂತಿದ್ದು, ಅವರಿಗೆ ಸಂತೋಷಕರ! ರಾತ್ರಿ ಹೆಚ್ಚು ಹೊತ್ತು ನಿದ್ರಿಸಿದರೆ ಹಗಲು ಹೆಚ್ಚು ಜಾಗರೂಕವಾಗಿರಬಹುದಂತೆ. ಇದು ಬೇರೆ ದೇಶಗಳ ಜನರಿಗಷ್ಟೆ ಅನ್ವಯಿಸುತ್ತದೆ.

ಭಾರತೀಯರಾದರೋ ಅಹೋ ರಾತ್ರಿ ನಿದ್ರಾಮುದ್ರಿತರು; ಕುಂಭಕರ್ಣನೇ ಅವರಿಗೆ ಆದರ್ಶ! ಸುಭಾಷಿತವೊಂದು ಹೇಳುವಂತೆ, `ನಿದ್ರೆ ಕಲಹಗಳಲ್ಲಿ' ಅವರ ಕಾಲಹರಣ. (ಅವೇ ಭಾರತೀಯರ ಹರಣ). ದೇಶದ ಸ್ಥಿತಿಗೆ ಇದೇ ಮುಖ್ಯ ಕಾರಣ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT