ADVERTISEMENT

ಮೆಚ್ಚು–ಕಿಚ್ಚು

ಎನ್ನಾರ್ ವಾಸುದೇವ ರಾವ್ ಶಿವಮೊಗ್ಗ
Published 22 ಜೂನ್ 2016, 19:30 IST
Last Updated 22 ಜೂನ್ 2016, 19:30 IST

ಅಂದು ಕೊಟ್ಟಾಗ
ಮಂತ್ರಿ ಪದವಿ
ಹೇಳಿದರು ಶಾಸಕರು
‘ಮುಖ್ಯಮಂತ್ರಿಗಳು
ನನಗೆ
ಅಚ್ಚುಮೆಚ್ಚು’.
ಇಂದು ಹೋದಾಗ
ಮಂತ್ರಿ ಪದವಿ
ಶಾಸಕರು ಹೇಳಿದ್ದಾರೆ
‘ಮುಖ್ಯಮಂತ್ರಿಗಳಿಗೆ
ನನ್ನ ಕಂಡರೆ
ಹೊಟ್ಟೆಕಿಚ್ಚು’
ಅಂತೂ...
ಅಧಿಕಾರ ದಾಹ
ಅಟ್ಟಹಾಸದಿಂದ
ಮೆರೆದಾಗ
ರಾಜ್ಯದ ಹಿತಾಸಕ್ತಿ
ನೇಪಥ್ಯ ಸೇರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.