ADVERTISEMENT

ಯದ್ವಾತದ್ವಾ ಕನ್ನಡ!

​ಪ್ರಜಾವಾಣಿ ವಾರ್ತೆ
Published 8 ಮೇ 2018, 19:30 IST
Last Updated 8 ಮೇ 2018, 19:30 IST

ರಾಷ್ಟ್ರಮಟ್ಟದ ನಾಯಕರನ್ನು ರಾಜ್ಯಕ್ಕೆ ಕರೆತಂದು, ಅವರ ಬಾಯಿಂದ ಯದ್ವಾತದ್ವಾ ಕನ್ನಡ ಮಾತಾಡಿಸಿದರೆ ‘ಕನ್ನಡಪ್ರೇಮಿ’ಗಳು ವೋಟ್ ಹಾಕಿಬಿಡುತ್ತಾರೆ ಎಂಬುದು ಅತಿದೊಡ್ಡ ಮೂಢನಂಬಿಕೆ.

ಸ್ವರ, ವ್ಯಂಜನ, ಅಲ್ಪಪ್ರಾಣ, ಮಹಾಪ್ರಾಣ, ಉಚ್ಚಾರದಲ್ಲಷ್ಟೇ ಅಲ್ಲ, ಧ್ವನಿಯ ಏರಿಳಿತದಲ್ಲೂ ವಿಶಿಷ್ಟ ಭಾವನೆಯನ್ನು ವ್ಯಕ್ತಪಡಿಸುವಷ್ಟು ಸೂಕ್ಷ್ಮತೆಯನ್ನು ಹೊಂದಿರುವ ಕನ್ನಡವನ್ನು, ಈ ನಾಯಕರು ಬೇಕಾಬಿಟ್ಟಿಯಾಗಿ ಉಚ್ಚರಿಸಿ ಹಾಸ್ಯದ ವಸ್ತುವನ್ನಾಗಿ ಮಾಡುತ್ತಿರುವುದು ದೊಡ್ಡ ದುರಂತ.

ಕನ್ನಡದಲ್ಲಿ ಮಾತನಾಡುವ ಪ್ರಯತ್ನ ಸ್ವಾಗತಾರ್ಹ. ಆದರೆ ಮಹನೀಯರ ಹೆಸರು ಹಾಗೂ ಅವರ ವಚನಗಳನ್ನು ಅನುಚಿತವಾಗಿ ಬಳಕೆ ಮಾಡುತ್ತಿರುವುದಕ್ಕೆ ನಮ್ಮ ಆಕ್ಷೇಪವಿದೆ.

ADVERTISEMENT

–ಸೋಮಲಿಂಗಪ್ಪ ಬೆಣ್ಣಿ, ಗುಳದಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.