ಬೆಂಗಳೂರಿನಿಂದ ಬೇರೆ ಊರುಗಳಿಗೆ ಹೋಗಿ ಬರುವವರಿಗಾಗಿ ಸಾರಿಗೆ ಇಲಾಖೆ ಸಾಕಷ್ಟು ಬಸ್ಗಳ ಸೌಲಭ್ಯ ಕಲ್ಪಿಸಿದೆ. ಇದು ಮೆಚ್ಚುವ ಸಂಗತಿ. ಆದರೆ ಇಂದಿಗೂ ಕೆಲವು ಬಡಾವಣೆಗಳಿಂದ ನಗರದ ಮುಖ್ಯ ಬಸ್ ನಿಲ್ದಾಣಗಳಿಗೆ ತೆರಳಲು ಸಾಕಷ್ಟು ಬಸ್ ಸೌಕರ್ಯ ಇಲ್ಲದಿರುವುದು ಖೇದದ ಸಂಗತಿ.
ಕಲ್ಯಾಣ ನಗರದಿಂದ (ಎಚ್.ಆರ್.ಬಿ.ಆರ್. ಬಡಾವಣೆ) ಮೈಸೂರಿಗೆ ಹೋಗಬೇಕಾದರೆ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಹೋಗಬೇಕು. ಆದರೆ ಕಲ್ಯಾಣ ನಗರ, ಎಚ್.ಆರ್.ಬಿ.ಆರ್. ಬಡಾವಣೆಯಿಂದ ಅಲ್ಲಿಗೆ ಹೋಗಲು ಸಮರ್ಪಕ ಬಸ್ ಸೌಕರ್ಯವಿಲ್ಲದೆ ಪ್ರಯಾಸ ಪಡಬೇಕಾಗಿದೆ. ಆದ್ದರಿಂದ ಬಿಎಂಟಿಸಿಯು ಕಲ್ಯಾಣ ನಗರದ ಬಡಾವಣೆಯಿಂದ ಸ್ಯಾಟ್ಲೈಟ್ ನಿಲ್ದಾಣಕ್ಕೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಿದರೆ ಬಹಳ ಅನುಕೂಲವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.