‘ಗುರು ಲಘುವಾದರೆ ಹೇಗೆ ಸ್ವಾಮಿ?’ ಎಂಬ ರವೀಂದ್ರ ಭಟ್ಟ ಅವರ ಲೇಖನಕ್ಕೆ (ಪ್ರ.ವಾ., ಡಿ. 30) ಪ್ರತಿಕ್ರಿಯೆ ಯಾಗಿ ಬರೆದ ಹಿರಿಯ ಕವಿ ಎಸ್.ಜಿ.ಸಿದ್ಧರಾಮಯ್ಯ ಅವರ ಪತ್ರ (ವಾ.ವಾ., ಜ. 1) ಓದಿದೆ. ತಮ್ಮ ಪಾವಿತ್ರ್ಯವನ್ನು ಉಳಿಸಿಕೊಂಡಿರುವ ಜೋಳಿಗೆಗಳನ್ನು ಹುಡುಕಬೇಕಿದೆ ಎಂದು ಅವರು ಹೇಳಿದ್ದಾರೆ. ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀಗಳಾದ ಸಿದ್ಧೇಶ್ವರ ಸ್ವಾಮಿಗಳು ಆ ಪಾವಿತ್ರ್ಯವನ್ನು ಉಳಿಸಿಕೊಂಡಿದ್ದಾರೆ. ಮುಖ್ಯಮಂತ್ರಿಯೇ ಖುದ್ದಾಗಿ ಕೇಳಿಕೊಂಡಾಗಲೂ ನಿರಾಕರಿಸಿದಂಥ ದಿಟ್ಟ ಸ್ವಾಮಿಗಳವರು.
- ಗುಬ್ಬಿ ರೇವಣಾರಾಧ್ಯ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.