ಮೂರು ದಿನಗಳ ಕಾಲ ಸುರಿದ ಮಳೆಯಿಂದಾಗಿ ಐತಿಹಾಸಿಕ ಕಿತ್ತೂರು ಕೋಟೆಯ ಹಿಂಭಾಗದ ರಕ್ಷಣಾ ಗೋಡೆಯು ಕುಸಿದು ಬಿದ್ದಿದೆ. ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಯವರು ಈ ಹಿಂದೆ ಒಂದುಬಾರಿ ಈ ಗೋಡೆಯನ್ನು ದುರಸ್ತಿಪಡಿಸಿದ್ದರೂ ಪುನಃ ಬಿದ್ದಿರುವುದು ದುರಂತವೇ ಸರಿ.
ನಾಡಿನ ಗತ ವೈಭವವನ್ನು ಸಾರುವ ಕೋಟೆ– ಕೊತ್ತಲ, ದೇವಸ್ಥಾನಗಳನ್ನು ಸಂರಕ್ಷಿಸುವ ಕರ್ತವ್ಯ ಜನರು ಹಾಗೂ ಸರ್ಕಾರದ ಮೇಲಿದೆ.
ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕೂಡಲೇ ಗಮನ ಹರಿಸಿ ಇದನ್ನು ದುರಸ್ತಿಪಡಿಸಬೇಕು.
– ಮಲ್ಲಿಕಾರ್ಜುನ ಮೇತ್ರಿ, ಹಿಂಚಗೇರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.