‘ಮಹಿಳೆಯರೆಲ್ಲರೂ ವೇಶ್ಯೆಯರಾಗಬೇಕು’ ಎಂದು ಕಾರ್ಲ್ ಮಾರ್ಕ್ಸ್ ಪ್ರತಿಪಾದಿಸಿದ್ದುದಾಗಿ ಎಸ್.ಗುರುಮೂರ್ತಿ ಹೇಳಿದ್ದಾರೆ (ಪ್ರ.ವಾ., ನ. 24). ಈ ಹೇಳಿಕೆಯು, ಇಂದು ನಮ್ಮನ್ನು ಆಳುತ್ತಿರುವ ಸಂಘ ಪರಿವಾರದ ಸಿದ್ಧಾಂತದ ಸಮರ್ಥಕರೂ ಅದರ ಸರ್ಕಾರಗಳ ಬೆನ್ನಿಗಿರುವ ‘ಆರ್ಥಿಕ ತಜ್ಞ’ರೂ ಆಗಿರುವ ಗುರುಮೂರ್ತಿಯವರಿಗೆ ಜಗತ್ತಿನ ಮಹಾನ್ ಅರ್ಥಶಾಸ್ತ್ರಜ್ಞ ಹಾಗೂ ರಾಜಕೀಯ ದಾರ್ಶನಿಕ ಮಾರ್ಕ್ಸ್ ಮತ್ತು ಅವರ ಚಿಂತನೆಗಳ ಬಗ್ಗೆ ಇರುವ ಅಜ್ಞಾನದ ಮಟ್ಟವನ್ನು ತೋರುತ್ತದೆ. ಮಾನವಘನತೆಯ ದಾರಿದ್ರ್ಯವನ್ನು ಬಯಲುಮಾಡುತ್ತದೆ.
-ವಿ.ಎನ್.ಲಕ್ಷ್ಮೀನಾರಾಯಣ,ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.