ಕನ್ನಡ ಅಂಕಿಗಳ ಉಪಯೋಗ ಮೊದಲಿನಿಂದಲೂ ಬಹಳ ಕಡಿಮೆ. ರಾಜ್ಯ ಸರ್ಕಾರವು ಕನ್ನಡ ಅಂಕಿಗಳನ್ನು ಬಳಸುವ, ಬೆಳೆಸುವ ಮತ್ತು ಉಳಿಸುವ ಕೆಲಸ ಮಾಡಲಿ. ಇಂದಿನ ತಲೆಮಾರಿನವರಿಗೆ ಕನ್ನಡ ಅಂಕಿಗಳನ್ನು ಬರೆದು ತೋರಿಸಿದರೂ ಗೊತ್ತೇ ಆಗುವುದಿಲ್ಲ! ಕಣ್ಣ ಮುಂದೆ ನಮ್ಮ ಭಾಷೆಯ ಅಂಕಿಗಳು ನಶಿಸಿ ಹೋಗುತ್ತಿರುವುದು ನಮ್ಮ ದೌರ್ಭಾಗ್ಯವೇ ಸರಿ. ಕನ್ನಡ ಅಂಕಿಗಳನ್ನು ಯಥೇಚ್ಛವಾಗಿ ಬಳಸುವ ದಿಸೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು.
ಹರವೆ ಸಂಗಣ್ಣ ಪ್ರಕಾಶ್,ಹರವೆ, ಚಾಮರಾಜನಗರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.