ADVERTISEMENT

ವಾಚಕರ ವಾಣಿ: ಕರ್ನಾಟಕಕ್ಕೆ ಸಿಗದ ಕೊಡುಗೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 17:28 IST
Last Updated 27 ಅಕ್ಟೋಬರ್ 2021, 17:28 IST

ವಿಧಾನಸಭಾ ಚುನಾವಣೆಗೆ ಕೇವಲ ಐದಾರು ತಿಂಗಳು ಬಾಕಿ ಇರುವಾಗ ಉತ್ತರಪ್ರದೇಶದಲ್ಲಿ ಪ್ರಧಾನಿ ಒಂದೇ ದಿನ 9 ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಿದ್ದಾರೆ.

ಆಡಳಿತದಲ್ಲಿ ಇರುವ ಸರ್ಕಾರಗಳು ಚುನಾವಣಾಪೂರ್ವದಲ್ಲಿ ಮತದಾರರನ್ನು ಓಲೈಸಲು ಈ ರೀತಿ ಕೊಡುಗೆಗಳನ್ನು ನೀಡುವುದರಲ್ಲಿ ವಿಶೇಷ ಇಲ್ಲ. ಆದರೆ, ಒಂದೇ ದಿನ 9 ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಮಾತ್ರ ‘ನ ಭೂತೋ ನ ಭವಿಷ್ಯತಿ’ ಎನ್ನಬಹುದು. ಇದು ‘ಸೀಜರನ ಪತ್ನಿ ಸಂಶಯಾತೀತ ಇರಬೇಕು’ ಎನ್ನುವ ಲೋಕ ನಿಯಮಕ್ಕೆ ವ್ಯತಿರಿಕ್ತವಾಗಿದೆ.

ವಿಪರ್ಯಾಸವೆಂದರೆ, 2018ರ ವಿಧಾನಸಭಾ ಚುನಾವಣೆ ಮತ್ತು 2019ರ ಲೋಕಸಭಾ ಚುನಾವಣೆ ಸಮಯದಲ್ಲಿ ಕರ್ನಾಟಕಕ್ಕೆ ಪ್ರಧಾನಿ ಇಂತಹ ಕೊಡುಗೆಗಳನ್ನು ನೀಡಲಿಲ್ಲ ಮತ್ತು ಕನ್ನಡಿಗರು ಇಂಥವುಗಳನ್ನು ಪ್ರಶ್ನಿಸುವುದೂ ಇಲ್ಲ.

ADVERTISEMENT

–ರಮಾನಂದ ಶರ್ಮಾ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.