ADVERTISEMENT

ಮತದಾರರ ಮನಗೆದ್ದವರು

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 19:30 IST
Last Updated 16 ಜೂನ್ 2020, 19:30 IST

ಸಚಿವ ರಮೇಶ ಜಾರಕಿಹೊಳಿ ಅವರು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಕೊಳಚೆಗೆ ಹೋಲಿಸಿದ್ದಾರೆ (ಪ್ರ.ವಾ., ಜೂನ್‌ 16). ಇದು ಸಚಿವ ಸ್ಥಾನಕ್ಕೆ ಗೌರವ ತರುವಂತಹ ಮಾತಲ್ಲ. ವೈಯಕ್ತಿಕ ರಾಜಕೀಯ ಏನೇ ಇರಲಿ, ಅದನ್ನು ಕೀಳು ಮಟ್ಟದ ಭಾಷೆಯ ಮೂಲಕ ತೋರ್ಪಡಿಸುವುದು ನಾಯಕತ್ವದ ಲಕ್ಷಣ ಅಲ್ಲ.

ಲಕ್ಷ್ಮಿ ಅವರು ಸಾವಿರಾರು ಮತದಾರರ ಮನಗೆದ್ದು ಶಾಸಕಿಯಾದವರು ಎಂಬುದನ್ನು ಜಾರಕಿಹೊಳಿಯವರು ನೆನಪಿಡಬೇಕು. ಅವರು ಹೀಗೆ ಕೀಳುಮಟ್ಟದ ಭಾಷೆಯ ಮೂಲಕ ಹೆಣ್ಣು ಮಕ್ಕಳನ್ನು ನಿಂದಿಸಿದರೆ, ಅವರ ನಾಯಕ ನರೇಂದ್ರ ಮೋದಿಯವರ ‘ಬೇಟಿ ಬಚಾವೋ ಬೇಟಿ ಪಢಾವೋ’ ಘೋಷಣೆಗೆ ಮಹತ್ವ ಬರುವುದಾದರೂ ಹೇಗೆ?

ವಿ.ಜಿ.ಇನಾಮದಾರ,ಸಾರವಾಡ, ವಿಜಯಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.