ನಾನು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿಂಗಣಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ್ದು. ನನ್ನ ನೆಚ್ಚಿನ ಕನ್ನಡ ಮೇಷ್ಟ್ರು ವಿ.ಎಸ್.ಗಲಗಲಿ ಗುರುಗಳು. ಅವರ ಮೊಗದಲ್ಲಿ ಸದಾ ಮಂದಹಾಸ, ಸರಳ ವ್ಯಕ್ತಿತ್ವ, ನೇರ ನುಡಿಗಳ ಮನುಷ್ಯ. ಮೊದಲು ನನಗೆ ಕಪ್ಪು ಹಲಗೆಯಲ್ಲಿ ಜೋಡಿಪದ ಹಾಕಿಕೊಟ್ಟು ತಿದ್ದಲು ಹೇಳುತ್ತಿದ್ದರು.
ದಿನಕ್ಕೊಂದು ಕಥೆ, ಹಾಡು ಹೇಳಿ ನಮ್ಮನ್ನು ರಂಜಿಸುತ್ತಿದ್ದರು. ಅವರು ಹೇಳುತ್ತಿದ್ದ ಜನಪದ ಗೀತೆಗಳು ನನಗೆ ಅಚ್ಚುಮೆಚ್ಚು. ಕನ್ನಡ ಓದುತ್ತಿದ್ದಾಗ ತಪ್ಪು ತಪ್ಪಾಗಿ ಓದಿದ್ದರೆ ಬೈಯದೇ ಶಾಂತಚಿತ್ತದಿಂದ ಇನ್ನೊಮ್ಮೆ ಓದಿಸಿ ಪದಗಳನ್ನು ಬಿಡಿಸಿ ಅದರ ಉಚ್ಚಾರಣೆದೊಂದಿಗೆ ಓದಿಸುತ್ತಿದ್ದರು.
ನಾನು ಅವರ ನೆಚ್ಚಿನ ಶಿಷ್ಯ ಆಗಿದ್ದೆ. ಅವರು ಮಾಡಿಸಿದ ಮಹಾಭಾರತದ ನಾಟಕ ಊರ ಜನರ ಮೆಚ್ಚುಗೆ ಗಿಟ್ಟಿಸಿಕೊಂಡಿತ್ತು. ನಾನು ಮಾಡಿದ ಕರ್ಣನ ಪಾತ್ರ ಮೆಚ್ಚಿ ಮೇಷ್ಟ್ರು ನನಗೆ ₹20 ಬಹುಮಾನ ಕೊಟ್ಟಿದ್ದರು. ಅವರ ನೆನಪಿನ ಕಾಣಿಕೆಯಾಗಿ ನೋಟನ್ನು ಇನ್ನೂ ತೆಗೆದಿಟ್ಟಿದ್ದೇನೆ.
-ಆರೀಫ ವಾಲೀಕಾರ, ರಾಣಿ ಚೆನ್ನಮ್ಮ ವಿವಿ ಬೆಳಗಾವಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.