ADVERTISEMENT

ದಕ್ಷಿಣ ಆಫ್ರಿಕಾಕ್ಕೆ ಅಂಧರ ಕ್ರಿಕೆಟ್ ತಂಡ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2014, 20:10 IST
Last Updated 24 ನವೆಂಬರ್ 2014, 20:10 IST

ಬೆಂಗಳೂರು: ರಾಜ್ಯದ ಶೇಖರ್ ನಾಯ್ಕ್‌ ನೇತೃತ್ವದ ಭಾರತ ಪುರುಷರ ಅಂಧರ ಕ್ರಿಕೆಟ್‌ ತಂಡ ಡಿಸೆಂಬರ್‌ 27ರಿಂದ ನಡೆಯಲಿರುವ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸೋಮವಾರ ದಕ್ಷಿಣ ಆಫ್ರಿಕಾಕ್ಕೆ ತೆರಳಿತು.

ಟೂರ್ನಿಯಲ್ಲಿ ಆಸ್ಟ್ರೇಲಿಯ, ಬಾಂಗ್ಲಾದೇಶ, ಇಂಗ್ಲೆಂಡ್‌, ಪಾಕಿಸ್ತಾನ, ಶ್ರೀಲಂಕಾ, ದ. ಆಫ್ರಿಕಾ ತಂಡಗಳು ಭಾಗವಹಿಸ­ಲಿವೆ. ಭಾರತದ ಆಟಗಾರರಿಗೆ ನವದೆಹಲಿಯಲ್ಲಿ ಔತಣ ಕೂಟ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕೇಂದ್ರ ಕ್ರೀಡಾ ಸಚಿವ ಸರ್ಬಾನಂದ ಸೋನೊವಾಲ್‌ ಭಾಗವಹಿ­ಸಿದ್ದು, ಆಟಗಾರರಿಗೆ ಅಭಿನಂದಿಸಿ ₨10 ಲಕ್ಷ ನೀಡುವುದಾಗಿ ಭರವಸೆ ನೀಡಿದರು. ರಾಜ್ಯದ ಶೇಖರ್‌ ಜತೆಗೆ ಪ್ರಕಾಶ್‌ ಜಯ­ರಾಮಯ್ಯ, ಚಿತ್ರದುರ್ಗದ ವೀರೇಶ್‌ ತಂಡದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.