ADVERTISEMENT

ಫೈನಲ್‌ ಪ್ರವೇಶಿಸಿದ ಸೌರಭ್ ವರ್ಮಾ

ಬ್ಯಾಡ್ಮಿಂಟನ್: ಪ್ರಶಸ್ತಿ ಸುತ್ತಿಗೆ ಋತುಪರ್ಣ ದಾಸ್‌, ಉತ್ತೇಜಿತ ರಾವ್‌

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 19:50 IST
Last Updated 16 ಜೂನ್ 2018, 19:50 IST
ಸೆಮಿಫೈನಲ್ ಪಂದ್ಯದಲ್ಲಿ ಸೌರಭ್‌ ವರ್ಮಾ ಅವರು ಷಟಲ್ ಹಿಂದಿರುಗಿಸಿದ ಪರಿ ಪ್ರಜಾವಾಣಿ ಚಿತ್ರ
ಸೆಮಿಫೈನಲ್ ಪಂದ್ಯದಲ್ಲಿ ಸೌರಭ್‌ ವರ್ಮಾ ಅವರು ಷಟಲ್ ಹಿಂದಿರುಗಿಸಿದ ಪರಿ ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯದ ಡ್ಯಾನಿಯಲ್‌ ಫರೀದ್‌ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದ ಪಿಇಟಿಯ ಸೌರಭ್‌ ವರ್ಮಾ ಯೋನೆಕ್ಸ್‌ ಸನ್‌ರೈಸ್‌ ಅಖಿಲ ಭಾರತ ಸೀನಿಯರ್‌ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿಯ ಫೈನಲ್‌ಗೆ ಲಗ್ಗೆ ಇರಿಸಿದರು.

ಕೆಬಿಎ ಅಂಗಣದಲ್ಲಿ ಶನಿವಾರ ನಡೆದ ಸೆಮಿಫೈನಲ್‌ ಏಕಪಕ್ಷೀಯವಾಗಿತ್ತು. ಡ್ಯಾನಿಯಲ್ ಅವರನ್ನು ಸೌರಭ್‌ 21–16, 21–14ರಿಂದ ಮಣಿಸಿದರು. ಫೈನಲ್‌ನಲ್ಲಿ ಅವರು ಅಗ್ರ ಶ್ರೇಯಾಂಕದ ಆಟಗಾರ, ಮಧ್ಯಪ್ರದೇಶದ ಪ್ರತುಲ್‌ ಜೋಶ್‌ ಅವರನ್ನು ಎದುರಿಸುವರು.

ಸೆಮಿಫೈನಲ್‌ನಲ್ಲಿ ಪ್ರತುಲ್‌ ಅವರು ನಾಲ್ಕನೇ ಶ್ರೇಯಾಂಕದ ಆಟಗಾರ, ಹರಿಯಾಣದ ಕಾರ್ತಿಕ್‌ ಜಿದ್ನಾಲ್‌ ಅವರನ್ನು 21–16, 21–16ರಿಂದ ಸೋಲಿಸಿದರು.ಮಹಿಳಾ ವಿಭಾಗದಲ್ಲಿ ತೆಲಂಗಾಣದ ಋತುಪರ್ಣ ದಾಸ್‌ ಮತ್ತು ಆಂಧ್ರಪ್ರದೇಶದ ಸಾಯಿ ಉತ್ತೇಜಿತ ರಾವ್‌ ಫೈನಲ್‌ಗೆ ಪ್ರವೇಶಿಸಿದರು.

ADVERTISEMENT

ಸೆಮಿಫೈನಲ್‌ನಲ್ಲಿ ಛತ್ತೀಸ್‌ಗಢದ ಆಕಾಶರಾಣಿ ಅವರನ್ನು ಋತುಪರ್ಣ ದಾಸ್ 21–11, 21–11ರಿಂದ ಸೋಲಿಸಿದರು. ಅಸ್ಸಾಂನ ಅಶ್ಮಿತಾ ಚಾಲಿಹಾ ಅವರನ್ನು 7–21, 21–15, 22–20ರಿಂದ ಮಣಿಸಿ ಸಾಯಿ ಉತ್ತೇಜಿತ ಅಂತಿಮ ಹಣಾಹಣಿಗೆ ಸಜ್ಜಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.