ಬೆಂಗಳೂರು: ನಗರದ ಕ್ರಿಕೆಟ್ಪ್ರಿಯರು ಶನಿವಾರ ಸಂಜೆ ಚಿನ್ನಸ್ವಾಮಿ ಕ್ರೀಡಾಂಗಣದತ್ತ ಮುಖ ಮಾಡಿದ್ದರು. ಅದಕ್ಕೆ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಕಣ್ತುಂಬಿಕೊಳ್ಳುವುದು.
ಶುಕ್ರವಾರ ನಗರಕ್ಕೆ ಬಂದಿಳಿದಿರುವ ವಿರಾಟ್ ಇಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಸಹ ಆಟಗಾರರಾದ ಸರ್ಫರಾಜ್ ಖಾನ್, ಮನದೀಪ್ ಸಿಂಗ್, ಕುಲವಂತ್ ಕೆಜ್ರೋಲಿಯಾ, ಬೌಲಿಂಗ್ ಕೋಚ್ ಆಶಿಶ್ ನೆಹ್ರಾ, ಥ್ರೋ ಡೌನ್ ಪರಿಣತ ರಾಘವೇಂದ್ರ ಅವರೊಂದಿಗೆ ಅಭ್ಯಾಸ ಮಾಡಿದರು. ಮೊದಲು ಓಟ ಮತ್ತು ವಾರ್ಮ್ ಅಪ್ ವ್ಯಾಯಾಮಗಳನ್ನು ಮಾಡಿದರು. ನಂತರ ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಿದರು.ವೇಗದ ಎಸೆತಗಳನ್ನು ಹೆಚ್ಚು ಎದುರಿಸಿದ ಅವರು ಪುಲ್, ಅಪ್ಪರ್ ಕಟ್, ಡ್ರೈವ್ಗಳನ್ನು ಆಡಿದರು. ನೆಹ್ರಾ ಮಾರ್ಗದರ್ಶನ ನೀಡಿದರು. ಐಪಿಎಲ್ನಲ್ಲಿ ಏಪ್ರಿಲ್ 8ರಂದು ಆರ್ಸಿಬಿ ತನ್ನ ಮೊದಲ ಪಂದ್ಯವನ್ನು ಕೋಲ್ಕತ್ತದಲ್ಲಿ ಆಡಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.