ಕಟಕ್: ನಾಯಕ ವಿರಾಟ್ ಕೊಹ್ಲಿ ನನ್ನ ಮೇಲಿಟ್ಟ ಮಹತ್ವದ ನಂಬಿಕೆಯೇ ಶತಕ ಸಿಡಿಸಲು ಸ್ಫೂರ್ತಿಯಾಯಿತು ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
ಭಾರತ– ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಯುವರಾಜ್ ಸಿಂಗ್ ಪಾತ್ರರಾದರು. ಆರು ವರ್ಷಗಳ ಬಳಿಕ ಶತಕ ಸಿಡಿಸಿದ ಯುವರಾಜ್ ಸಿಂಗ್, ಏಕದಿನ ಕ್ರಿಕೆಟ್ನಲ್ಲಿ ಗಳಿಸಿದ ಗರಿಷ್ಠ ಮೊತ್ತ ಇದಾಗಿದೆ.
ಸಹ ಆಟಗಾರರ ಮೇಲೆ ತಂಡದ ನಾಯಕ ಹೊಂದಿರುವ ಆತ್ಮ ವಿಶ್ವಾಸವೇ ಗೆಲುವಿಗೆ ಕಾರಣವಾಗಿತ್ತು. ಕೊಹ್ಲಿ ಸೇರಿದಂತೆ ಎಲ್ಲ ಆಟಗಾರರು ನನ್ನ ಮೇಲಿಟ್ಟಿದ ನಂಬಿಕೆ, ವಿಶ್ವಾಸವೇ ಅಮೋಘ ಆಟ ಪ್ರದರ್ಶನಕ್ಕೆ ಸಾಕ್ಷಿಯಾಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ.
ನನ್ನ ಕ್ರೀಡಾ ಬದುಕಿನ ಪಯಣದಲ್ಲಿ ಅಭಿಮಾನಿಗಳ ಬೆಂಬಲ ಅಪಾರವಾಗಿದ್ದು, ತಮ್ಮ ಆಟದ ಸಿದ್ಧಾಂತವನ್ನು ಎಂದಿಗೂ ಬಿಟ್ಟುಕೊಡದೇ, ಕಠಿಣ ಅಭ್ಯಾಸ ಹಾಗೂ ಪರಿಶ್ರಮ ವಹಿಸುವುದಾಗಿ ಅವರು ಹೇಳಿದ್ದಾರೆ.
2011ರ ವಿಶ್ವಕಪ್ ಬಳಿಕ ಈಗ ಶತಕ ಸಿಡಿಸಲು ಸಾಧ್ಯವಾಗಿದೆ. ಇದು ನನ್ನಗೆ ಹೆಚ್ಚು ತೃಪ್ತಿ ನೀಡಿದೆ ಎಂದರು. ಕ್ಯಾನ್ಸರ್ನಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ಬಳಿಕ ವಿದಾಯ ಘೋಷಿಸುವ ಅಲೋಚನೆ ಮುಡಿದ್ದು ಸಹಜ. ಮೂರು ವರ್ಷಗಳ ಬಳಿಕ ರಾಷ್ಟ್ರೀಯ ಏಕದಿನ ತಂಡಕ್ಕೆ ಮರಳಿದ ನಾನು ಆರಂಭದಲ್ಲಿ ಫಿಟ್ನೆಸ್ ಸಮಸ್ಯೆ ಎದುರಿಸಬೇಕಾಯಿತ್ತು ಎಂದರು.
ಕಳೆದ ವರ್ಷ ನಡೆದ ರಣಜಿ ಸರಣಿಯಲ್ಲಿ ಉತ್ತಮ ಪ್ರದರ್ಶನ ತೊರಿಸಿದ ಯುವರಾಜ್ ಮತ್ತೊಮ್ಮೆ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಯಾಗಲು ಸಾಧ್ಯವಾಯಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.