ನವದೆಹಲಿ (ಪಿಟಿಐ): ಕರ್ನಾಟಕ ತಂಡದವರು ಮಾರ್ಚ್ 19ರಿಂದ ಕೋಲ್ಕತ್ತದಲ್ಲಿ ನಡೆಯುವ 72ನೇ ಸಂತೋಷ್ ಟ್ರೋಫಿ ಫುಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ‘ಬಿ’ ಗುಂಪಿನಲ್ಲಿ ಆಡಲಿದ್ದಾರೆ.
ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಬುಧವಾರ ಟೂರ್ನಿಯ ಡ್ರಾ ಪ್ರಕಟಿಸಿದೆ.
ಪ್ರಾಥಮಿಕ ಸುತ್ತಿನಲ್ಲಿ ಆಡಿ ಪ್ರಮುಖ ಘಟ್ಟಕ್ಕೆ ಲಗ್ಗೆ ಇಟ್ಟಿರುವ ಒಟ್ಟು 10 ತಂಡಗಳನ್ನು ಎರಡು ಗುಂಪುಗಳನ್ನಾಗಿ ವಿಭಾಗಿಸಲಾಗಿದೆ. ‘ಎ’ ಗುಂಪಿನಲ್ಲಿ ಹಾಲಿ ಚಾಂಪಿಯನ್ ಪಶ್ಚಿಮ ಬಂಗಾಳ, ಚಂಡೀಗಡ, ಮಣಿಪುರ, ಕೇರಳ ಮತ್ತು ಮಹಾರಾಷ್ಟ್ರ ತಂಡಗಳು ಇವೆ. ಕರ್ನಾಟಕ, ಗೋವಾ, ಮಿಜೋರಾಂ, ಒಡಿಶಾ ಮತ್ತು ಪಂಜಾಬ್ ತಂಡಗಳು ‘ಬಿ’ ಗುಂಪಿನಲ್ಲಿ ಸ್ಥಾನ ಗಳಿಸಿವೆ.
ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಗಳಿಸುವ ತಂಡಗಳು ಸೆಮಿಫೈನಲ್ಗೆ ಲಗ್ಗೆ ಇಡಲಿವೆ. ಮಾರ್ಚ್ 30 ರಂದು ನಾಲ್ಕರ ಘಟ್ಟದ ಪಂದ್ಯಗಳು ನಡೆಯಲಿದ್ದು, ಏಪ್ರಿಲ್ 1ರಂದು ಫೈನಲ್ ಆಯೋಜನೆಯಾಗಿದೆ.
ಮಾರ್ಚ್ 19ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಪಶ್ಚಿಮ ಬಂಗಾಳ ತಂಡ ಮಣಿಪುರ ವಿರುದ್ಧ ಸೆಣಸಲಿದೆ. ದಿನದ ಮತ್ತೊಂದು ಹೋರಾಟದಲ್ಲಿ ಚಂಡೀಗಡ ಮತ್ತು ಕೇರಳ ಎದುರಾಗಲಿವೆ.
ಕರ್ನಾಟಕ ತಂಡ ಮಾರ್ಚ್ 22 ರಂದು ಜರುಗುವ ‘ಬಿ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಗೋವಾ ಎದುರು ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.