ADVERTISEMENT

ಟಿ.ಟಿ: ರಾಜ್ಯದ ಅನರ್ಘ್ಯಾಗೆ ಕಂಚಿನ ಪದಕ

​ಪ್ರಜಾವಾಣಿ ವಾರ್ತೆ
Published 30 ಜೂನ್ 2019, 19:30 IST
Last Updated 30 ಜೂನ್ 2019, 19:30 IST
ಅನರ್ಘ್ಯಾ ಮಂಜುನಾಥ್‌ ಖುಷಿಯ ಕ್ಷಣ
ಅನರ್ಘ್ಯಾ ಮಂಜುನಾಥ್‌ ಖುಷಿಯ ಕ್ಷಣ   

ಬೆಂಗಳೂರು: ಕರ್ನಾಟಕದ ಅನರ್ಘ್ಯಾ ಮಂಜುನಾಥ್‌, ಹರಿಯಾಣದ ಸೋನೆಪತ್‌ನಲ್ಲಿ ನಡೆದ ರಾಷ್ಟ್ರೀಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ (ಉತ್ತರ ವಲಯ) ಕಂಚಿನ ಪದಕ ಗೆದ್ದಿದ್ದಾರೆ.

ಜೂನಿಯರ್‌ ಬಾಲಕಿಯರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಅನರ್ಘ್ಯಾ 0–4 ಗೇಮ್‌ಗಳಿಂದ ಮಧ್ಯಪ್ರದೇಶದ ಅನುಷಾ ಕುಟುಂಬಲೆ ಎದುರು ಪರಾಭವಗೊಂಡರು.

ಇದಕ್ಕೂ ಮೊದಲು ನಡೆದಿದ್ದ ಕ್ವಾರ್ಟರ್‌ ಫೈನಲ್‌ನಲ್ಲಿ ಅನರ್ಘ್ಯಾ 11–9, 11–5, 14–12, 11–9ರಲ್ಲಿ ನವದೆಹಲಿಯ ಲಕ್ಷಿತಾ ನಾರಂಗ್‌ ಅವರನ್ನು ಮಣಿಸಿದ್ದರು.

ADVERTISEMENT

ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕದ ಆಟಗಾರ್ತಿ 3–1ರಲ್ಲಿ ಪಶ್ಚಿಮ ಬಂಗಾಳದ ಪೊಯಮಂಟಿ ಬೈಸ್ಯಾ ಅವರನ್ನು ಸೋಲಿಸಿದ್ದರು.

ಈ ವಿಭಾಗದ ಚಿನ್ನದ ಪದಕಅನುಷಾ ಕುಟುಂಬಲೆ ಪಾಲಾಯಿತು. ಫೈನಲ್‌ನಲ್ಲಿ ಅವರು 4–1ರಲ್ಲಿ ಎಎಐನ ಸ್ವಸ್ತಿಕಾ ಘೋಷ್‌ ಎದುರು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.