ADVERTISEMENT

ಸೆಮಿಗೆ ಬ್ಯಾಂಕ್‌ ಆಫ್‌ ಬರೋಡ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 20:28 IST
Last Updated 23 ಆಗಸ್ಟ್ 2019, 20:28 IST

ಬೆಂಗಳೂರು: ಆತಿಥೇಯ ಬ್ಯಾಂಕ್‌ ಆಫ್‌ ಬರೋಡ ತಂಡವು ಮುಲ್ಕಿ ಸುಂದರ ರಾಮ್‌ ಶೆಟ್ಟಿ ಅಖಿಲ ಭಾರತ ಆಹ್ವಾನಿತ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಮಲ್ಲೇಶ್ವರದ ಬೀಗಲ್ಸ್‌ ಬ್ಯಾಸ್ಕೆಟ್‌ಬಾಲ್‌ ಅರೇನಾದಲ್ಲಿ ಶುಕ್ರವಾರ ನಡೆದ ‘ಬಿ’ ಗುಂಪಿನ ಹಣಾಹಣಿಯಲ್ಲಿ ಬ್ಯಾಂಕ್‌ ಆಫ್‌ ಬರೋಡ 108–80 ಪಾಯಿಂಟ್ಸ್‌ನಿಂದ ಕರ್ನಾಟಕ ತಂಡವನ್ನು ಪರಾಭವಗೊಳಿಸಿತು.

ಬರೋಡ ತಂಡದ ಹರೀಶ್‌, ರಾಬಿ ಮತ್ತು ಅರವಿಂದ್‌ ಕ್ರಮವಾಗಿ 27, 24 ಹಾಗೂ 19 ಪಾಯಿಂಟ್ಸ್‌ ಗಳಿಸಿ ಗಮನ ಸೆಳೆದರು.

ADVERTISEMENT

ಈ ಗುಂಪಿನ ಇನ್ನೊಂದು ಪಂದ್ಯದಲ್ಲಿ ಚೆನ್ನೈಯ ಇಂಡಿಯನ್‌ ಬ್ಯಾಂಕ್‌ 108–83 ಪಾಯಿಂಟ್ಸ್‌ನಿಂದ ಗುಜರಾತ್‌ನ ಇನ್‌ಕಮ್‌ ಟ್ಯಾಕ್ಸ್‌ ತಂಡವನ್ನು ಸೋಲಿಸಿತು.

‘ಎ’ ಗುಂಪಿನ ಪಂದ್ಯಗಳಲ್ಲಿ ತಿರುವನಂತಪುರದ ಕೆಎಸ್‌ಇಬಿ 78–61ರಲ್ಲಿ ಡಿಎಲ್‌ಡಬ್ಲ್ಯು ಎದುರೂ, ಚೆನ್ನೈಯ ಇನ್‌ಕಮ್‌ ಟ್ಯಾಕ್ಸ್‌ 70–50ರಲ್ಲಿ ಚೆನ್ನೈಯ ಐಸಿಎಫ್‌ ವಿರುದ್ಧವೂ ಗೆದ್ದವು.

ಕೆಎಸ್‌ಇಬಿ ಮತ್ತು ಇನ್‌ಕಮ್‌ ಟ್ಯಾಕ್ಸ್‌ ತಂಡಗಳು ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.