ಬೆಂಗಳೂರು: ಸಾತ್ವಿಕ್ ಎಂ. ಮತ್ತು ರಾಶಿ ವಿ.ರಾವ್ ಅವರು ಕರ್ನಾಟಕ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 15 ವರ್ಷದೊಳಗಿನವರ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ಗೆದ್ದರು.
ನಗರದ ವಿ.ವಿ.ಪುರಂನ ಮ್ಯಾಚ್ ಪಾಯಿಂಟ್ ಅಕಾಡೆಮಿಯಲ್ಲಿ ನಡೆದ ಟೂರ್ನಿಯ ಬಾಲಕರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸಾತ್ವಿಕ್ 12-10, 9-11, 11-6, 10-12, 11-6 ರಿಂದ ಶ್ರೀರಾಮ್ ಕಿರಣ್ ಅವರನ್ನು ಮಣಿಸಿತು. ಸೆಮಿಫೈನಲ್ನಲ್ಲಿ ಸಾತ್ವಿಕ್ 11-3, 12-10, 11-8 ರಿಂದ ಆದ್ಯೋತ್ ಯು. ವಿರುದ್ಧ; ಶ್ರೀರಾಮ್ 11-9, 11-8 , 11-9 ರಿಂದ ರೇಯಾನ್ಶ್ ಜಲನ್ ವಿರುದ್ಧ ಗೆಲುವು ಸಾಧಿಸಿದ್ದರು.
ಬಾಲಕಿಯರ ಫೈನಲ್ನಲ್ಲಿ ರಾಶಿ 11-8 , 11-7 , 11-6ರಿಂದ ಕ್ರಿಶಾ ಪಿ. ಕರ್ಕೇರ ಅವರನ್ನು ಮಣಿಸಿದರು. ಸೆಮಿಫೈನಲ್ನಲ್ಲಿ ರಾಶಿ 11-7, 11-9, 9-11, 11-3 ಸಾಕ್ಷ್ಯಾ ಸಂತೋಷ್ ಎದುರು; ಕ್ರಿಶಾ 11-8, 7-11, 11-9, 13-11ರಿಂದ ಲಕ್ಷ್ಮಿ ಆಶ್ರಿತಾ ಎದುರು ಜಯ ಸಾಧಿಸಿದ್ದರು.
ಎನ್ಎಂಎಸ್ ವಿಭಾಗದ ಫೈನಲ್ನಲ್ಲಿ ಕೆ.ಎಸ್. ಸಾಯಿ ಪ್ರಶಾಂತ್ ಪ್ರಶಸ್ತಿ ಗೆದ್ದರು. ಅವರು ಫೈನಲ್ನಲ್ಲಿ 11-6, 9-11, 12-10, 11-7ರಿಂದ ಗಣೇಶ್ ಹಿರೇಮಠ ಅವರನ್ನು ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.