ADVERTISEMENT

ರಾಜ್ಯ ಪುರಸ್ಕಾರಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2019, 19:52 IST
Last Updated 13 ಅಕ್ಟೋಬರ್ 2019, 19:52 IST
ರಾಜ್ಯ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಪುನೀತ್‌ ಕುಮಾರ್‌.ಕೆ.ಆರ್‌ ಹೊಸದುರ್ಗ ರಾಮದೇವರ ಬೆಟ್ಟದ ಟ್ರಕ್ಕಿಂಗ್‌ನಲ್ಲಿ ಪಾಲ್ಗೊಂಡಿದ್ದ ಸಂಧರ್ಭ
ರಾಜ್ಯ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಪುನೀತ್‌ ಕುಮಾರ್‌.ಕೆ.ಆರ್‌ ಹೊಸದುರ್ಗ ರಾಮದೇವರ ಬೆಟ್ಟದ ಟ್ರಕ್ಕಿಂಗ್‌ನಲ್ಲಿ ಪಾಲ್ಗೊಂಡಿದ್ದ ಸಂಧರ್ಭ   

ಹಾರೋಹಳ್ಳಿ (ಕನಕಪುರ): ಇಲ್ಲಿನ ಹಾರೋಹಳ್ಳಿ ಪ್ರಗತಿ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿ ಪುನೀತ್‌ ಕುಮಾರ್‌.ಕೆ.ಆರ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿಭಾಗದಿಂದ ರಾಜ್ಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ನ. 4ರಿಂದ 8ರವರೆಗೆ ರಾಜ್ಯ ಪುರಸ್ಕಾರದ ಪರೀಕ್ಷೆ ನಡೆಯಲಿದ್ದು ಪರೀಕ್ಷೆ ತರಬೇತಿಗಾಗಿ ಕೋಡಿಹಳ್ಳಿ ಶಾರದ ಶಾಲೆಯಲ್ಲಿ 3 ದಿನಗಳ ತರಬೇತಿ ಕಾರ್ಯಗಾರ ನಡೆಯಿತು.

ಎರಡು ದಿನಗಳ ಕಾಲ ರಾಜ್ಯ ಪುರಸ್ಕಾರ ಆಯ್ಕೆ ಬಗ್ಗೆ ತರಬೇತಿ ನೀಡಿ ಕೊನೆಯ ದಿನ ಹೊಸದುರ್ಗ ರಾಮದೇವರ ಬೆಟ್ಟದಲ್ಲಿ ಟ್ರಕ್ಕಿಂಗ್‌ ಕಾರ್ಯಗಾರವನ್ನು ನಡೆಸಲಾಯಿತು.

ADVERTISEMENT

ಕಾರ್ಯಾಗಾರವನ್ನು ಪಾಲ್ಗೊಂಡ ಪುನೀತ್‌ ಕುಮಾರ್‌ ರಾಜ್ಯ ಪುರಸ್ಕಾರದ ಆಯ್ಕೆಗೆ ಬೇಕಿರುವ ಎಲ್ಲ ಅಗತ್ಯ ತರಬೇತಿ ಮತ್ತು ಮಾಹಿತಿ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.