ADVERTISEMENT

ಟಿಟಿ: ಯಶ್ವಂತ್‌, ಹಿಮಾಂಶಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 16:28 IST
Last Updated 26 ಜೂನ್ 2025, 16:28 IST
ಹಿಮಾಂಶಿ ಚೌಧರಿ ಹಾಗೂ ಯಶ್ವಂತ್‌ ಪಿ.
ಹಿಮಾಂಶಿ ಚೌಧರಿ ಹಾಗೂ ಯಶ್ವಂತ್‌ ಪಿ.   

ಬೆಂಗಳೂರು: ಹಿಮಾಂಶಿ ಚೌಧರಿ ಹಾಗೂ ಯಶ್ವಂತ್‌ ಪಿ. ಅವರು ಕರ್ನಾಟಕ ಸರ್ಕಾರದ ಸಚಿವಾಲಯ (ಕೆಜಿಎಸ್‌) ಕ್ಲಬ್ ಆಯೋಜಿಸಿರುವ ರಾಜ್ಯ ರ‍್ಯಾಂಕಿಂಗ್‌ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು.

ನಗರದ ಕೆಜಿಎಸ್‌ ಕ್ಲಬ್‌ನಲ್ಲಿ ಟೂರ್ನಿಯ ಎರಡನೇ ದಿನವಾದ ಗುರುವಾರ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ ಪಂದ್ಯದಲ್ಲಿ, ಯಶ್ವಂತ್‌ 11–6, 11–8, 11–7, 11–3ರಿಂದ ವಿಭಾಸ್‌ ವಿ.ಜಿ. ಅವರನ್ನು ಸೋಲಿಸಿದರು.

ಸೆಮಿಫೈನಲ್ ಪಂದ್ಯಗಳಲ್ಲಿ ಯಶ್ವಂತ್‌ 12–14, 11–5, 11–8, 11–9, 3–11, 11–7ರಿಂದ ಅಥರ್ವ ನವರಂಗೆ ಅವರನ್ನು ಹಾಗೂ ವಿಭಾಸ್‌ ವಿ.ಜಿ 7–11, 11–6, 8–11, 11–7, 11–6, 11–7ರಿಂದ ಅಕ್ಷಯ್‌ ಮಹಾಂತ ಅವರನ್ನು ಮಣಿಸಿದರು.

ADVERTISEMENT

‌ಮಹಿಳೆಯರ ಸಿಂಗಲ್ಸ್‌ ಫೈನಲ್‌ನಲ್ಲಿ ಹಿಮಾಂಶಿ ಚೌಧರಿ 13–11, 11–5, 7–11, 11–6, 6–11, 11–8ರಿಂದ ತೃಪ್ತಿ ಪುರೋಹಿತ್‌ ಎದುರು ಗೆಲುವು ಸಾಧಿಸಿದರು.

ಸೆಮಿಫೈನಲ್ ಪಂದ್ಯಗಳಲ್ಲಿ ಹಿಮಾಂಶಿ 12–10, 11–6, 11–7, 11–7ರಿಂದ ಪ್ರೇಕ್ಷಾ ಟಿ. ತಿಲಾವತ್‌ ವಿರುದ್ಧ; ತೃಪ್ತಿ 11–8, 11–7, 11–6, 8–11, 10–12, 11–3ರಿಂದ ತನಿಷ್ಕಾ ಕಪಿಲ್‌ ಕಾಲಭೈರವ ವಿರುದ್ಧ ಜಯ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.