ADVERTISEMENT

ಸಬ್‌ ಜೂನಿಯರ್‌ ಟೇಬಲ್‌ ಟೆನಿಸ್‌ ಟೂರ್ನಿ: ಆಕಾಶ್‌, ಯಶಸ್ವಿನಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2018, 18:16 IST
Last Updated 25 ಜೂನ್ 2018, 18:16 IST
ಕೆ.ಜೆ.ಆಕಾಶ್‌
ಕೆ.ಜೆ.ಆಕಾಶ್‌   

ಬೆಂಗಳೂರು: ಅಮೋಘ ಆಟ ಆಡಿದ ಕೆ.ಜೆ.ಆಕಾಶ್‌ ಮತ್ತು ಜಿ.ಯಶಸ್ವಿನಿ ಅವರು ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಮಲ್ಲೇಶ್ವರಂ ಸಂಸ್ಥೆಯಲ್ಲಿ ಸೋಮವಾರ ನಡೆದ ಸಬ್‌ ಜೂನಿಯರ್‌ ಬಾಲಕರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಆಕಾಶ್‌ 11–4, 13–11, 11–8ರ ನೇರ ಗೇಮ್‌ಗಳಿಂದ ಶ್ರೀಕಾಂತ್‌ ಕಶ್ಯಪ್‌ ಅವರನ್ನು ಮಣಿಸಿದರು.

ಸೆಮಿಫೈನಲ್‌ ಪಂದ್ಯಗಳಲ್ಲಿ ಶ್ರೀಕಾಂತ್‌ 5–11, 11–8, 11–6, 11–8ರಲ್ಲಿ ಸಮ್ಯಕ್‌ ಕಶ್ಯಪ್‌ ಎದುರೂ, ಆಕಾಶ್‌ 11–5, 11–6, 11–7ರಲ್ಲಿ ಮಾರ್ಕಸ್‌ ಗಿಜು ಮೇಲೂ ಗೆದ್ದಿದ್ದರು.

ADVERTISEMENT

ಸಬ್‌ ಜೂನಿಯರ್‌ ಬಾಲಕಿಯರ ಸಿಂಗಲ್ಸ್‌ ಫೈನಲ್‌ನಲ್ಲಿ ಜಿ.ಯಶಸ್ವಿನಿ 11–4, 12–10, 5–11, 11–9ರಲ್ಲಿ ಜಿ.ಕರುಣಾ ಅವರನ್ನು ಪರಾಭವಗೊಳಿಸಿದರು.

ನಾಲ್ಕರ ಘಟ್ಟದ ಹಣಾಹಣಿಗಳಲ್ಲಿ ಯಶಸ್ವಿನಿ 11–5, 11–4, 11–5ರಲ್ಲಿ ರೈನಾ ನಾರಾ ಎದುರೂ, ಕರುಣಾ 11–5, 11–4, 11–6ರಲ್ಲಿ ತೃಪ್ತಿ ಪುರೋಹಿತ್‌ ವಿರುದ್ಧವೂ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.