ಮುಳಗುಂದ: ಊರ ಹೊರವಲಯದ ಸಂದಿಕೇರಿ ಹತ್ತಿರ ಸಿಡಿಲು ಬಡಿದು ಇಲ್ಲಿಯ ಅಂಬೇಡ್ಕರ್ ನಗರದ ಫಕ್ಕೀರವ್ವ ಶಿವಪ್ಪ ಸಣ್ಣತಮ್ಮಣ್ಣನವರ (45) ಭಾನುವಾರ ಮೃತಪಟ್ಟಿದ್ದಾರೆ.
ಆಡು ಮೇಯಿಸಲು ಹೊಲಕ್ಕೆ ಹೋದ ಸಂದರ್ಭದಲ್ಲಿ ಸಿಡಿಲು ಬಡಿದಿದ್ದು, ಆಡು ಸಹ ಸಾವಿಗೀಡಾಗಿದೆ.
ಪಟ್ಟಣ ಮತ್ತು ಸುತ್ತ ಮುತ್ತಲಿನ ಪ್ರದೇಶದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಮಳೆಯಿಂದ ಪಟ್ಟಣದ ಕೆಲವು ರಸ್ತೆಗಳು ಜಲಾವೃತಗೊಂಡಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಕೆಲವೆಡೆ ಒಡ್ಡು ಒಡೆದು ಹೊಲಗಳಿಗೆ ನೀರು ನುಗ್ಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.