ADVERTISEMENT

ಕೊಳವೆಬಾವಿ ಕೊರೆಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 8:54 IST
Last Updated 21 ಏಪ್ರಿಲ್ 2017, 8:54 IST

ಬಾಗಲಕೋಟೆ: ತಾಲ್ಲೂಕಿನ ಬೋಡನಾಯಕದಿನ್ನಿಯಲ್ಲಿ ಪರಿಶಿಷ್ಟ ಜಾತಿ ಫಲಾನುಭವಿಯ ಜಮೀನಿನಲ್ಲಿ ಕೊಳವೆ ಬಾವಿ ಕೊರೆಯುವ ಕಾರ್ಯಕ್ಕೆ ಶಾಸಕ ಎಚ್.ವೈ.ಮೇಟಿ ಚಾಲನೆ ನೀಡಿದರು.ಕೃಷ್ಣಾ ಭಾಗ್ಯ ಜಲನಿಗಮ 2016-–17ನೇ ಸಾಲಿನ ಬಾಗಲಕೋಟೆ ಮತಕ್ಷೇತ್ರದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ವಿಶೇಷ ಘಟಕ) ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಕೊಳವೆಬಾವಿ ಮುಖಾಂತರ ನೀರಾವರಿ ಸೌಲಭ್ಯ ಒದಗಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ಸರ್ಕಾರ ‘ಎಲ್ಲರಿಗೂ ಸಮ ಬಾಳು ಎಲ್ಲರಿಗೂ ಸಮಪಾಲು’ ಎಂಬ ಧ್ಯೆಯ ವಾಕ್ಯದಡಿಯಲ್ಲಿ ಎಲ್ಲ ಸಮಾಜದವರ ಅಭಿವೃದ್ಧಿಗೆ ಬದ್ಧವಿದೆ’ ಎಂದರು.

₹ 36 ಲಕ್ಷ ವೆಚ್ಚದಲ್ಲಿ ಬೋಡನಾಯಕದಿನ್ನಿ, ಶಿರೂರ, ಮುಚಖಂಡಿಯಲ್ಲಿ ಕೊಳವೆ ಬಾವಿಗಳನ್ನು ಕೊರೆಯಲಾಗುತ್ತಿದೆ. ಇದರ ಪ್ರಯೋಜನ ಪಡೆದುಕೊಂಡು ಆರ್ಥಿಕ ಹಾಗೂ ಸಾಮಾಜಿಕವಾಗಿ ಬೆಳವಣಿಗೆ ಸಾಧಿಸಬೇಕು ಎಂದು ಹೇಳಿದರು.ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ಮುತ್ತಪ್ಪ ಹುಗ್ಗಿ, ಪ್ರಭು ಡೇರೆದ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸಿ.ವಿ.ಬಿದರೂರಮಠ, ಕಿರಿಯ ಎಂಜಿನಿಯರ್ ಡಿ.ವೈ.ಕೋಲ ಕರ, ಗುತ್ತಿಗೆದಾರ ಆರ್.ಬಿ.ಸಿದರಡ್ಡಿ, ಮಡಿವಾಳಗೌಡ ಬಿರಾದಾರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT