ಕಮತಗಿ(ಅಮೀನಗಡ): ವಿದ್ಯುತ್ ಅವಘಡದಿಂದ ಪಟ್ಟಣದ ದಾವಲಬಿ ಅಬ್ದುಲಖಾದರ್ ಮಂಗಳೂರ ಅವರ ಮನೆಗೆ ಬೆಂಕಿ ತಗುಲಿ ಜಂತಿಮನೆ ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಬುಧವಾರ ನಡೆದಿದೆ. ಚಾವಣಿ ಕುಸಿದು ಬಿದ್ದು ಒಟ್ಟು ₹ 3 ಲಕ್ಷ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಮನೆಗೆ ಬೆಂಕಿ ತಗುಲಿದಾಗ ಅಕ್ಕಪಕ್ಕದವರು ಕೂಗಾಡಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಮನೆಯ ಮೇಲೆ ಮಲಗಿದ ಅಬ್ದುಲ ಖಾದರ್ ಎಂಬುವವರು ಜನರ ಕೂಗಾಟ ಕೇಳಿ ಕೆಳಗಿಳಿದು ಬಂದ ಮರುಕ್ಷಣವೇ ಮನೆ ಕುಸಿದು ಬಿದ್ದಿದೆ ಎನ್ನಲಾಗಿದೆ.
ಳಕಲ್ನ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿತು. ₹ 25 ಸಾವಿರ ಬೆಲೆ ಬಾಳುವ ಸಾಗುವಾನಿ ಕಟ್ಟಿಗೆ, ಎರಡೂವರೆ ತೊಲೆ ಬಂಗಾರದ ಆಭರಣ, ಹತ್ತು ತೊಲೆ ಬೆಳ್ಳಿ ಆಭರಣ, ಎರಡು ಮೊಬೈಲ್, ಬಟ್ಟೆಗಳು, ಹೊಲಿಗೆ ಯಂತ್ರ, ಫ್ಯಾನು ಸೇರಿದಂತೆ ದವಸ ಧಾನ್ಯ ಗೃಹೋಪ ಯೋಗಿ ವಸ್ತುಗಳು ಸಂಪೂರ್ಣ ಹಾನಿಗೊಳಗಾಗಿವೆ ಎಂದು ಮೂಲಗಳು ತಿಳಿಸಿವೆ. ಅಮೀನಗಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಹಾಂತೇಶ ಅಂಗಡಿ, ಮುಖ್ಯಾಧಿಕಾರಿ ಮೋಹನ ಜಾಧವ ಭೇಟಿ ನೀಡಿ ಪರಿಶೀಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.