ADVERTISEMENT

ಕೂಡ್ಲಿಗಿ: ಬಸ್‌ ಸಂಚಾರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 6:46 IST
Last Updated 3 ಫೆಬ್ರುವರಿ 2017, 6:46 IST
ಕೂಡ್ಲಿಗಿ: ಬಸ್‌ ಸಂಚಾರಕ್ಕೆ ಚಾಲನೆ
ಕೂಡ್ಲಿಗಿ: ಬಸ್‌ ಸಂಚಾರಕ್ಕೆ ಚಾಲನೆ   

ಕೂಡ್ಲಿಗಿ: ಹಿಂದುಳಿದ ತಾಲ್ಲೂಕಾಗಿರುವ ಕೂಡ್ಲಿಗಿಯಲ್ಲಿ ಸಾರಿಗೆ ಸುಧಾರಣೆಗೆ ಹೆಚ್ಚು ಹೊಸ ಬಸ್ಸುಗಳನ್ನು ನೀಡುವಂತೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಮೇಲೆ ಒತ್ತಡ ತರಲಾಗಿದೆ ಎಂದು ಈಶಾನ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಜಿ.ಆರ್. ಸಿದ್ದೇಶ್ ಹೇಳಿದರು. ಅವರು ಸ್ಥಳೀಯ ಸಾರಿಗೆ ಘಟಕದಲ್ಲಿ ಮಂಗಳವಾರ ಎರಡು ಬಸ್ಸುಗಳ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಘಟಕದಲ್ಲಿ ಸಾಕಷ್ಟು ಹಳೆ ಬಸ್ಸುಗಳಿದ್ದು, ಅವುಗಳ ಸಂಚಾರವನ್ನು ಈಗಾಗಲೇ ನಿಲ್ಲಿಸಲಾಗಿದೆ. ಇದರಿಂದ ತಾಲ್ಲೂಕಿನ ಗ್ರಾಮೀಣ ಪ್ರದೇಶ ಸೇರಿದಂತೆ ಪಟ್ಟಣದಿಂದ ವಿವಿಧ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸಲು ಬಸ್ಸುಗಳ ಕೊರತೆಯಾಗಿದೆ. ಇದನ್ನು ಸರಿದೂಗಿಸಲು ಕೂಡ್ಲಿಗಿ ಘಟಕಕ್ಕೆ ತಕ್ಷಣಕ್ಕೆ 25ರಿಂದ 30 ಬಸ್ಸುಗಳನ್ನು ನೀಡಲು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ಮೂಲಕ ಸಚಿವರ ಮೇಲೆ ಒತ್ತಡ ತರಲಾಗಿದ್ದು, ಇದರ ಅಂಗವಾಗಿ ಎರಡು ಬಸ್ಸುಗಳನ್ನು ನೀಡಲಾಗಿದೆ. ಶೀಘ್ರದಲ್ಲಿ ಉಳಿದ ಬಸ್ಸುಗಳೂ ಬರುವ ವಿಶ್ವಾಸ ವ್ಯಕ್ತಪಡಿಸಿದ ಅವರು, ಸಂಸ್ಥೆಗೆ ಹೆಚ್ಚು ಲಾಭ ಬರುವಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮ ವಹಿಸಿ ಕೆಲಸ ಮಾಡಬೇಕು ಎಂದು ಹೇಳಿದರು.

ಘಟಕದ ವ್ಯವಸ್ಥಾಪಕ ಪ್ರದೀಪಕುಮಾರ್ ಮಾತನಾಡಿದರು. ಕಾಂಗ್ರೆಸ್ ಮುಖಂಡ ಶಾಂತೇಶ್, ಸಂಚಾರ ನಿಯಂತ್ರಕ ಛಲಪತಿ ಮತ್ತು ಸಂಸ್ಥೆಯ ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.