ADVERTISEMENT

ನವಭಾರತ ನಿರ್ಮಾಣ ನಮೆĿಲ್ಲರ ಹೊಣೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2016, 9:51 IST
Last Updated 26 ಜುಲೈ 2016, 9:51 IST

ದೊಡ್ಡಬಳ್ಳಾಪುರ: ಸಂವಿಧಾನದ ಆಶಯಗಳನ್ನು ತಿಳಿದುಕೊಂಡು  ಅವುಗಳ ಆಧಾರದ ಮೇಲೆ ಹೊಸ ಭಾರತವನ್ನು ಕಟ್ಟುವುದೇ ನಮ್ಮೆಲ್ಲರ ಕರ್ತವ್ಯ ಎಂದು ವಕೀಲ ಬಾಪು ಹೆದ್ದೂರು ಶೆಟ್ಟಿ ಹೇಳಿದರು.

ಅವರು ಕೊಂಗಾಡಿಯಪ್ಪ ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸಮಾಜವಾದಿ ಅಧ್ಯಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತ ವೈವಿಧ್ಯತೆಗಳನ್ನು ಒಳಗೊಂಡಿರುವ ದೇಶ. ರಾಜಕೀಯ ಸ್ಥಾನ ಮಾನಗಳು ದುರ್ಬಲ ವರ್ಗದವರಿಗೆ ಮಹಿಳೆಯರಿಗೆ ಈಗಲೂ ಗಗನ ಕಸುಮವಾಗಿವೆ ಎಂದು ವಿಷಾಧ ವ್ಯಕ್ತಪಡಿಸಿದರು.

ದೇಶದಲ್ಲಾದ ಅಭಿವೃದ್ಧಿಯಿಂದ ವಂಚಿತರಾದ ಬುಡಕಟ್ಟು ಜನಾಂಗಗಳ, ನಿರ್ಗತಿಕರನ್ನು ಅಭಿವೃದ್ಧಿಯ ಪರಿಧಿಯೊಳಗೆ ತರಲು ಪ್ರಯತ್ನಗಳಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಪ್ರೊ.ಬಿ.ಎನ್. ಶಶಿಧರ್, ಸಮಾಜ ಶಾಸ್ತ್ರದ ಮುಖ್ಯಸ್ಥ ಪ್ರೊ. ರಂಗಸ್ವಾಮಿ, ಎನ್.ಎಸ್.ಎಸ್. ಅಧಿಕಾರಿ ಪ್ರೊ. ಚಂದ್ರಪ್ಪ, ಸಹಾಯಕ ಅಧಿಕಾರಿ ಪ್ರವೀಣ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.