ದೇವನಹಳ್ಳಿ : ನಾಡ ಪ್ರಭು ಕೆಂಪೇ ಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ನಲ್ಲಿ ವಾರ್ಷಿಕ ದಸರ ಋತುಮಾನದ ಪರಂಪರೆಯ ಸಾಂಪ್ರಾದಾಯಕ ಗೊಂಬೆ ಪ್ರಯಾಣಿಕರ ಗಮನ ಸಳೆಯುತ್ತಿದೆ.
ಪರಿಪೂರ್ಣ ಸ್ಧಳಿಯ ಪ್ರಾದೇಶಿಕ ಹಿನ್ನಲೆಯಲ್ಲಿಯೇ ಪ್ರದರ್ಶಿನಕ್ಕಿಡ ಲಾಗಿರುವ ಪ್ರತಿಯೊಂದು ಬೊಂಬೆ ಗಳು ಒಂದಕ್ಕೊಂದು ವಿಭಿನ್ನವಾಗಿವೆ. ಒಂಬತ್ತು ದಿನದ ರಾತ್ರಿಯ ಉತ್ಸವ ಆಚರಣೆಯಲ್ಲಿ ಒಂಬತ್ತು ಕಡೆಗಳಲ್ಲಿ ಶೃಂಗರಿಸಿದ ವೇದಿಕೆಯಲ್ಲಿ ಸಜ್ಜು ಗೊಳಿಸಲಾಗಿದ್ದು, ಸಂಪ್ರದಾಯದ ಸಂಕೇತ ಎದ್ದು ಕಾಣುತ್ತಿದೆ.
ಸಂಸ್ಕೃತಿ ಕಲೆ ಸಂಪ್ರದಾಯವನ್ನು ವಿದೇಶಿ ಯರಿಗೂ ಪರಿಚಯಿಸುವ ನಿಟ್ಟಿನಲ್ಲಿ ವಿಮಾನ ನಿಲ್ದಾಣದ ಉದ್ಯೋಗಿಗಳು ಸೇರಿ ಪ್ರದರ್ಶನಕ್ಕೆ ಅಣಿಮಾಡಿ ರು ವುದು ಶ್ಲಾಘನೀಯವಾಗಿದೆ ಎನ್ನುತ್ತಾರೆ ಪ್ರಯಾಣಿಕರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.