ಮೋಳೆ: ಕಾಗವಾಡ ವಿಧಾನ ಕ್ಷೇತ್ರದಿಂದ ಸಂಸದ ಪ್ರಕಾಶ ಹುಕ್ಕೇರಿ ಸೇರಿ ಯಾರೇ ಸ್ಪರ್ಧಿಸಿದರೂ ತಾವು ಹೆದರುವುದಿಲ್ಲ ಎಂದು ಶಾಸಕ ರಾಜು ಕಾಗೆ ಸ್ಪಷ್ಟಪಡಿಸಿದರು.
ಐನಾಪುರ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಗವಾಡ ಮಂಡಲ ಬಿಜೆಪಿ ಯುವಮೋರ್ಚಾ ಕಾರ್ಯ ಕಾರಿಣಿ ಸಭೆಯಲ್ಲಿ ದೀನದಯಾಳ ಉಪಾಧ್ಯಾಯ, ಭಗವಾನ ಮಹಾವೀರರ ಹಾಗೂ ಡಾ. ಬಿ.ಆರ್. ಅಂಬೇಡ್ಕರ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದರು.
ಮತದಾರರ ಬೇಡಿಕೆಗಳಿಗೆ ಸ್ಪಂದಿಸಿದ್ದೇನೆ. ಮುಂದೆಯೂ ಸಮಸ್ಯೆ ಗಳ ಪರಿಹಾರಕ್ಕೆ ಪ್ರಯತ್ನಿಸುವೆ. ತಮ್ಮ ಕಾರ್ಯಗಳಿಗೆ ಮತದಾರರ ಬೆಂಬಲ ಇದೆ, ಹೀಗಾಗಿ ತಮ್ಮ ಮತ್ತು ಮತ ದಾರರ ಮಧ್ಯ ಅವಿನಾಭಾವ ಸಂಪರ್ಕ ಇರುವುದರಿಂದ ಯಾರಿಗೂ ಹೆದರುವ ಅವಶ್ಯಕತೆ ಇಲ್ಲ ಎಂದರು.
ಅಥಣಿ ತಾಲ್ಲೂಕಿನಲ್ಲಿ ಬಿಜೆಪಿ ಬೇರುಗಳು ಗಟ್ಟಿಯಾಗಿವೆ. ಪಕ್ಷದ ಕಾರ್ಯಕರ್ತರು ಯಾವುದೇ ಆಮಿಷಕ್ಕೆ ಬಲಿಯಾಗುವುದಿಲ್ಲ. 2018ರ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿ ಜಯ ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಯುವಮೋರ್ಚಾ ಅಧ್ಯಕ್ಷ ಕಾಕಾ ಪಾಟೀಲ, ಮುಖಂಡ ರಾದ ಚಿದಾನಂದ ಡೂಗನವರ, ಡಾ. ಮೋಹನ ಕಾರ್ಚಿ, ಸಂಜಯ ಪಾಟೀಲ, ವಿಶ್ವನಾಥ ಪೊಲೀಸಪಾಟೀಲ, ಪರಪ್ಪ ಡೂಗನವರ, ಬಹಾದ್ದೂರ ಕುಡಚಿ, ತಮ್ಮಣ್ಣ ಪಾರಶೆಟ್ಟಿ, ಸುನೀಲ ಮಾಳಿ, ರವೀಂದ್ರ ಗಾಣಿಗೇರ, ಚಿದಾನಂದ ಕುಡಚಿ, ಅನೀಲ ನಾವಲಿಗೇರ ಪಾಲ್ಗೊಂಡಿದ್ದರು. ಮಹೇಶ ಸೊಲ್ಲಾಪುರ ಕಾರ್ಯಕ್ರಮ ನಿರೂಪಿಸಿದರು. ರಘೋತ್ತಮ ಮುತಾಲಿಕ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.