ಸವದತ್ತಿ : ಇಲ್ಲಿನ ಹೆಸ್ಕಾಂನ ಸಹಾಯಕ ಎಂಜನಿಯರ ದೇವರಾಜ ಹೆಗಡೆ ಗುತ್ತಿಗೆದಾರರಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹೆಸ್ಕಾಂ ಸಹಾಯಕ ಎಂಜನಿಯರ್ ಹೆಗಡೆ ಅವರು, ಶಿರಸಂಗಿಯ ನಿರಂತರ ಜ್ಯೋತಿ ಕಾಮಗಾರಿ ಮಾಡಿದ ಗುತ್ತಿಗೆದಾರ ರವಿಕುಮಾರ ಬಸಪ್ಪ ಕುಂಬಾರ ಎಂಬವರು 2016 ರಲ್ಲಿ ನಡೆದ ಕೆಲಸದ ₹ 5 ಲಕ್ಷ ಬಿಲ್ಲು ತಗೆದುಕೊಡಲು ₹ 10 ಸಾವಿರ ಕೇಳಿದ್ದರು. ಲಂಚ ಕೊಡದೇ ಬಿಲ್ಲು ಮಂಜೂರು ಮಾಡುವುದಿಲ್ಲಾ ಎಂದು ಹಠಕ್ಕೆ ಬಿದ್ದಿದ್ದರು.
ಈ ಕುರಿತು ಮೇಲಧಿಕಾರಿಗಳ ಗಮನಕ್ಕೂ ತಂದಾಗ್ಯೂ ಪ್ರಯೋಜನವಾಗದೆ ಇದ್ದಾಗ, ಲೋಕಾಯುಕ್ತರ ಮೋರೆ ಹೊಗಿದ್ದರು. ಶನಿವಾರ ಸಾಯಂಕಾಲ ಲಂಚ ಪಡೆಯುವಾಗ ಲೋಕಾಯುಕ್ತ ಎಸ್ಪಿ ಚನ್ನಬಸಪ್ಪ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ರಘು ಜೆ ನೆತೃತ್ವದಲ್ಲಿ ನಡೆದ ದಾಳಿಯಲ್ಲಿ ಹೆಗಡೆ ಬಲೆಗೆ ಬಿದ್ದರು. ಈ ಹಿಂದೆ 2000ರಲ್ಲಿ ಮುಂಡಗೋಡದಲ್ಲಿ ಲೋಕಾಯುಕ್ತ ಅಧಿಕಾರಿ ಬಲೆಗೆ ಬಿದ್ದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.