ADVERTISEMENT

ಇಂದು ಕುಂದು ಕೊರತೆ ನಿವಾರಣೆ ಸಭೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2015, 20:18 IST
Last Updated 31 ಮಾರ್ಚ್ 2015, 20:18 IST

ಬೆಂಗಳೂರು: ಜಲಮಂಡಳಿಯು ಇದೇ ಬುಧವಾರ (ಏ.1) ಬೆಳಿಗ್ಗೆ 7ರಿಂದ 9.30ರ ವರೆಗೆ ಉಪವಿಭಾಗ ಹಾಗೂ ಸೇವಾಠಾಣೆಗಳಲ್ಲಿ ಕುಂದು ಕೊರತೆ ನಿವಾರಣೆ ಸಭೆಯನ್ನು ಏರ್ಪಡಿಸಿದೆ.

ಈ ಸೇವಾಠಾಣೆ ವ್ಯಾಪ್ತಿಯ ಸಾರ್ವಜನಿಕರು ಭಾಗವಹಿಸಿ ನೀರು ಮತ್ತು ಒಳಚರಂಡಿ ವ್ಯವಸ್ಥೆಯ ಬಗೆಗಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳ ಬಹುದು ಎಂದು ಪ್ರಕಟಣೆ ತಿಳಿಸಿದೆ. ಪಶ್ಚಿಮ–3 ಉಪವಿಭಾಗದ ಕೆಂಗೇರಿ (96111 28374), ದಕ್ಷಿಣ–3 ಉಪವಿಭಾಗದ ಬಿಟಿಎಂ–12 (2294 5151), ಪೂರ್ವ–3 ಉಪವಿಭಾಗದ ಕೆ.ಆರ್‌.ಪುರ (2294 5158), ಈಶಾನ್ಯ–3 ಉಪವಿಭಾಗದ ಸಂಜಯ್‌ನಗರ (2294 5245) ಹಾಗೂ ವಾಯವ್ಯ–3 ಉಪವಿಭಾಗದ ಹೆಗ್ಗನಹಳ್ಳಿಯಲ್ಲಿ ಸಭೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.