ADVERTISEMENT

ಇಂದು ವಿದ್ಯುತ್ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2016, 19:30 IST
Last Updated 3 ಡಿಸೆಂಬರ್ 2016, 19:30 IST

ಬೆಂಗಳೂರು: ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿಯ (ಬೆಸ್ಕಾಂ) ಎನ್‌ಆರ್‌ಎಸ್‌ ಸ್ಟೇಷನ್, ಬ್ಯಾಡರಹಳ್ಳಿ, ಮಹಾಲಕ್ಷ್ಮಿ ಲೇಔಟ್‌, ಬೃಂದಾವನ, ನೆಲೆಗೆದರನಹಳ್ಳಿ, ನಂದಿನಿ ಲೇಔಟ್‌ನ 66/11 ಕೆ.ವಿ. ವಿದ್ಯುತ್‌ ವಿತರಣಾ ಕೇಂದ್ರಗಳಲ್ಲಿ ಡಿ.4ರಂದು ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿದ್ದು, ಅದರಿಂದಾಗಿ ನಗರದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

‘ಅಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ರಾಜಾಜಿನಗರ, ವಿದ್ಯಾರಣ್ಯನಗರ, ವಿಜಯನಗರ 1ನೇ ಹಂತ, ತಿಮ್ಮೇನಹಳ್ಳಿ, ಗೋವಿಂದರಾಜನಗರ,  ಮಹಾಗಣಪತಿನಗರ, ಸುಂಕದಕಟ್ಟೆ, ವೀರಭದ್ರೇಶ್ವರ ನಗರ, ಮಾರುತಿ ನಗರ, ಮಾಗಡಿ ಮುಖ್ಯ ರಸ್ತೆ, ಪೀಣ್ಯ 4ನೇ ಹಂತ, ಅಂಜನಾ ನಗರ, ಕೊಡಗಿಹಳ್ಳಿ, ಬಸವೇಶ್ವರ ನಗರ, ಗಾಯತ್ರಿ ಲೇಔಟ್‌, ಹೆಗ್ಗನಹಳ್ಳಿ, ಶ್ರೀಚಕ್ರ ನಗರ, ಇಸ್ಕಾನ್‌ ದೇವಸ್ಥಾನ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ’ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.