ADVERTISEMENT

ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2015, 20:14 IST
Last Updated 3 ಆಗಸ್ಟ್ 2015, 20:14 IST

ಬೆಂಗಳೂರು: ಸಹಕಾರನಗರ ಸಮೀಪದ ರೈಲ್ವೆ ಸಮಾನಾಂತರ ರಸ್ತೆ ಬಳಿ ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ಐವರು ಆರೋಪಿಗಳನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅನ್ನಸಂದ್ರಪಾಳ್ಯದ ಹ್ಯಾರಿ ಪಿಂಟೊ (20), ಪ್ರತಾಪ್‌ಕುಮಾರ್ (19), ಮಹಮದ್ ನಯೀಮ್‌ (21) ಕಾಡುಗೋಡಿಯ ಮದನ್‌ಕುಮಾರ್ (19) ಮತ್ತು ಇಸ್ಲಾಂಪುರದ ಅರ್ಜುನ್ (18) ಎಂಬುವರನ್ನು ಬಂಧಿಸಲಾಗಿದೆ.

ಆರೋಪಿಗಳು ನಕಲಿ ಕೀ ಬಳಸಿ  ದ್ವಿಚಕ್ರ  ವಾಹನಗಳನ್ನು ಕಳವು ಮಾಡುತ್ತಿದ್ದರು. ಅವುಗಳನ್ನು ಬಳಸಿಕೊಂಡು ನಿರ್ಜನ ಪ್ರದೇಶಗಳಿಗೆ ತೆರಳಿ ಹೊಂಚು ಹಾಕಿ ಕುಳಿತು ದರೋಡೆ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಜುಲೈ 31ರಂದು ಆರೋಪಿ ಗಳನ್ನು ಬಂಧಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.