ADVERTISEMENT

ಕಮಿಷನರ್‌ ಭೇಟಿ

ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ

​ಪ್ರಜಾವಾಣಿ ವಾರ್ತೆ
Published 25 ಜುಲೈ 2014, 19:48 IST
Last Updated 25 ಜುಲೈ 2014, 19:48 IST

ಹೆಣ್ಣೂರು: ಕ್ರೈಸ್ತ  ಸನ್ಯಾಸಿನಿ ತರಬೇತಿಗೆ ಬಂದಿದ್ದ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಮಾಹಿತಿ ಪಡೆಯಲು ನಗರದ ನೂತನ ಪೊಲೀಸ್ ಕಮಿಷನರ್‌ ಎಂ.ಎನ್.ರೆಡ್ಡಿ ಅವರು ಹೆಣ್ಣೂರು ಸಮೀಪದ ಭೈರವೇಶ್ವರ­ನಗರದ ಸೆಮಿನರಿಗೆ ಶುಕ್ರವಾರ ಭೇಟಿ ನೀಡಿದರು.

ಅತ್ಯಾಚಾರಕ್ಕೊಳಗಾದ ಬಾಲಕಿ ಹಾಗೂ ಇತರೆ ಸನ್ಯಾಸಿನಿಯರ ಜತೆ ಸುಮಾರು 30 ನಿಮಿಷ ಮಾತುಕತೆ ನಡೆಸಿದ ಅವರು, ಪ್ರಕರಣದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಭರವಸೆ ಕೊಟ್ಟರು.

ನಂತರ ಸುದ್ದಿಗಾರರ ಜತೆ ಮಾತನಾಡಿದ ಕಮಿಷನರ್‌, ‘ಬಾಲಕಿ ಗೊಂದಲದ ಹೇಳಿಕೆಗಳನ್ನು ನೀಡುತ್ತಿ­ದ್ದಾಳೆ. ಇಬ್ಬರು ಇನ್‌­ಸ್ಪೆಕ್ಟರ್‌ಗಳ ತಂಡ ಆರೋಪಿಗಳ ಪತ್ತೆಯಲ್ಲಿ ತೊಡಗಿದೆ. 3–4 ದಿನಗಳಲ್ಲಿ ಪ್ರಕರಣದ ಬಗ್ಗೆ ಸ್ಪಷ್ಟತೆ ಸಿಗಲಿದೆ’ ಎಂದರು.

ಬಾಲಕಿ ಆಂಧ್ರಪ್ರದೇಶ ಮೂಲ­ದವಳು. ಸಂಬಂಧಿಕರ ಹೇಳಿಕೆ ಪಡೆ ಯಲು ಒಂದು ತಂಡವನ್ನು ಆಂಧ್ರ ಪ್ರದೇಶಕ್ಕೆ ಕಳುಹಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.