ADVERTISEMENT

ಕೆ.ಎಸ್.ಭಗವಾನ್ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 28 ಜೂನ್ 2017, 20:36 IST
Last Updated 28 ಜೂನ್ 2017, 20:36 IST
ಕೆ.ಎಸ್.ಭಗವಾನ್ ವಿರುದ್ಧ ದೂರು
ಕೆ.ಎಸ್.ಭಗವಾನ್ ವಿರುದ್ಧ ದೂರು   

ಬೆಂಗಳೂರು: ಪ್ರೊ. ಕೆ.ಎಸ್.ಭಗವಾನ್ ಅವರು ಗೋಮಾಂಸ ತಿಂದು, ಇತರರಿಗೂ ಅದನ್ನು ತಿನ್ನುವಂತೆ ಪ್ರಚೋದಿಸಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ದ ವೈಯಾಲಿಕಾವಲ್‌ ಠಾಣೆಗೆ ಬಿಜೆಪಿಯ ಗೋಸಂರಕ್ಷಕ ಪ್ರಕೋಷ್ಠ ಸಂಚಾಲಕ ಸುಂದರ್ ರಾಜ್ ರೈ ಅವರು ದೂರು ಕೊಟ್ಟಿದ್ದಾರೆ.

‘ಮೈಸೂರಿನ ಸರ್ಕಾರಿ ಕಲಾ ಮಂದಿರದಲ್ಲಿ ಜೂನ್‌ 25ರಂದು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ಬುದ್ಧಿಜೀವಿಗಳೆಂದು ಹೇಳಿಕೊಂಡು ತಿರುಗಾಡುವ ಭಗವಾನ್, ಮಹೇಶ್ ಚಂದ್ರಗುರು ಹಾಗೂ ಇತರರು ಗೋಮಾಂಸ ತಿಂದಿದ್ದು, ಬೇರೆಯವರಿಗೂ ಅದನ್ನು ತಿನ್ನುವಂತೆ ಪ್ರಚೋದಿಸಿದ್ದಾರೆ. ಜತೆಗೆ ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಭಾಷಣ ಮಾಡಿದ್ದಾರೆ’ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ನಡೆ ಬಹುಸಂಖ್ಯಾತರ ಭಾವನೆ, ನಂಬಿಕೆ ಹಾಗೂ ವೈಯಕ್ತಿಕವಾಗಿ ನನಗೆ ಘಾಸಿ ಉಂಟು ಮಾಡಿದೆ. ಹೀಗಾಗಿ, ಅಷ್ಟೂ ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಅಧಿಕಾರಿಗಳನ್ನು ಕೋರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.