ADVERTISEMENT

‘ಗೋಪಾಲಕೃಷ್ಣ ಅಡಿಗರಿಗೆ ಅರ್ಹ ಮನ್ನಣೆ ಸಿಕ್ಕಿಲ್ಲ’

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2017, 20:21 IST
Last Updated 1 ನವೆಂಬರ್ 2017, 20:21 IST
ಕಾರ್ಯಕ್ರಮದಲ್ಲಿ ಆಯುರ್ವೇದ ತಜ್ಞ ಡಾ. ಬಿ.ವಿ.ಶೇಷಾದ್ರಿ, ಬಿ.ವೆಂಕಟಕೃಷ್ಣ ಕೆದ್ಲಾಯ ಮತ್ತು ಉದ್ಯಮಿ ಎಚ್‌.ಸುಬ್ಬಣ್ಣ ಕೆದ್ಲಾಯ ಅವರಿಗೆ ಧನ್ವಂತರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಸಾಪ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಮಾಯಣ್ಣ, ವಕೀಲ ಎಸ್‌.ಎನ್‌. ಪ್ರಶಾಂತ್‌ಚಂದ್ರ, ರಾಮಕೃಷ್ಣ ಅಡಿಗ ಮತ್ತು ದಕ್ಷಿಣ ಕನ್ನಡ ಕನ್ನಡಿಗರ ಸಂಘದ ಅಧ್ಯಕ್ಷ ಬಾ.ರಾಮಚಂದ್ರ ಉಪಾಧ್ಯ ಇದ್ದರು
ಕಾರ್ಯಕ್ರಮದಲ್ಲಿ ಆಯುರ್ವೇದ ತಜ್ಞ ಡಾ. ಬಿ.ವಿ.ಶೇಷಾದ್ರಿ, ಬಿ.ವೆಂಕಟಕೃಷ್ಣ ಕೆದ್ಲಾಯ ಮತ್ತು ಉದ್ಯಮಿ ಎಚ್‌.ಸುಬ್ಬಣ್ಣ ಕೆದ್ಲಾಯ ಅವರಿಗೆ ಧನ್ವಂತರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಸಾಪ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಮಾಯಣ್ಣ, ವಕೀಲ ಎಸ್‌.ಎನ್‌. ಪ್ರಶಾಂತ್‌ಚಂದ್ರ, ರಾಮಕೃಷ್ಣ ಅಡಿಗ ಮತ್ತು ದಕ್ಷಿಣ ಕನ್ನಡ ಕನ್ನಡಿಗರ ಸಂಘದ ಅಧ್ಯಕ್ಷ ಬಾ.ರಾಮಚಂದ್ರ ಉಪಾಧ್ಯ ಇದ್ದರು   

ಬೆಂಗಳೂರು: ‘ಕವಿ ಗೋಪಾಲಕೃಷ್ಣ ಅಡಿಗರಿಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಅರ್ಹವಾಗಿ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ’ ಎಂದು ಲೇಖಕ ಬಿ.ವೆಂಕಟಕೃಷ್ಣ ಕೆದ್ಲಾಯ ಬೇಸರ ವ್ಯಕ್ತಪಡಿಸಿದರು.

ಕನ್ನಡ ರಾಜ್ಯೋತ್ಸವದ ಅಂಗವಾಗಿ ದಕ್ಷಿಣ ಕನ್ನಡ ಕನ್ನಡಿಗರ ಸಂಘವು ಬುಧವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧನ್ವಂತರಿ ಪುರಸ್ಕಾರ ಸ್ವೀಕರಿಸಿ ಅವರು ಮಾತನಾಡಿದರು.

‘ಸಾಹಿತಿಗಳ ಎಲ್ಲ ಬರಹಗಳು ಸರಳವಾಗಿರುವುದಿಲ್ಲ. ಕೆಲವೊಂದು ಸಂಕೀರ್ಣವಾಗಿಯೂ ಇರುತ್ತವೆ. ಇದು ಸರ್ವೇಸಾಮಾನ್ಯ. ಅಂತೆಯೇ, ಅಡಿಗರ ಒಂದಷ್ಟು ಕಾವ್ಯಗಳು ಸಂಕೀರ್ಣವಾಗಿರುವುದು ನಿಜ. ಅವರು ಕೂಡ ಸರಳ ಸುಂದರ ಸಾಹಿತ್ಯದ ಮೂಲಕ ಕನ್ನಡ ಸಾಂಸ್ಕೃತಿಕ ಲೋಕವನ್ನು   ಶ್ರೀಮಂತಗೊಳಿಸಿದ್ದಾರೆ. ಆದರೆ, ಅವರ ಕವಿತೆಗಳು ಜನರಿಗೆ ಅರ್ಥವಾಗುವುದೇ ಇಲ್ಲ ಎಂದು ಸಾಹಿತ್ಯದ ಒಂದು ವಲಯ ಅಪಪ್ರಚಾರ ನಡೆಸಿತು’ ಎಂದರು.

ADVERTISEMENT

‘ಅಡಿಗರ ಕವನಗಳಲ್ಲಿ ಕರಾವಳಿ ಕರ್ನಾಟಕ ಭಾಗದ ಸಾಂಸ್ಕೃತಿಕ ಮತ್ತು ಭೌಗೋಳಿಕ ಸನ್ನಿವೇಶಗಳ ದೃಷ್ಟಾಂತಗಳು ಹೆಚ್ಚಾಗಿ ಬಳಕೆಯಾಗಿವೆ. ದಕ್ಷಿಣ ಕನ್ನಡದ ಜನರ ಸಂಸ್ಕೃತಿ ಮತ್ತು ಭಾರತದ ಮಹಾಕಾವ್ಯಗಳ ಪರಿಚಯವಿರುವವರಿಗೆ ಅವರ ಕವನಗಳು ಸುಲಭವಾಗಿ ಅರ್ಥವಾಗುತ್ತವೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.